Advertisement

ಕುಟ್ಟಿ ಕಾರ್ಟೂನು

10:12 PM Dec 13, 2019 | Lakshmi GovindaRaj |

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು, ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಕೆ.ಎಸ್‌. ಕುಟ್ಟಿ ಸ್ಮರಣಾರ್ಥ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ ಪ್ರದರ್ಶನ ಆಯೋಜಿಸಿದೆ. ಕೇರಳದ ಒಟ್ಟಪಾಲಮ್‌ನಲ್ಲಿ 1940ರಲ್ಲಿ ಜನಿಸಿದ ಕುಟ್ಟಿ, ನ್ಯಾಷನಲ್‌ ಹೆರಾಲ್ಡ್‌, ಫ್ರೀ ಪ್ರಸ್‌ ಜರ್ನಲ್‌, ಹಿಂದೂಸ್ತಾನ್‌ ಸ್ಟಾಂಡರ್ಡ್‌, ಆಜ್‌ ಕಲ್‌ ಮುಂತಾದ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು.

Advertisement

ಸ್ವಾತಂತ್ರಪೂರ್ವ ಮತ್ತು ನಂತರದಲ್ಲಿ ನಡೆದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಕುಟ್ಟಿ ಅವರ ಮೊನಚಾದ ವ್ಯಂಗ್ಯಚಿತ್ರಗಳಲ್ಲಿ ಕಾಣಬಹುದು. ಈ ಪ್ರದರ್ಶನದಲ್ಲಿ ಅವರ ಆಯ್ದ 60 ರಾಜಕೀಯ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಜಯವಾಡ “ಹ್ಯೂಮರ್‌ ಟೂನ್‌’ನ ಸಂಪಾದಕ ಚೀಪುರು ಕಿರಣ್‌ ಕುಮಾರ್‌, ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್‌ ಫೋರ್ಡ್‌ ಹೌಸ್‌, ಮಿಡ್‌ ಫೋರ್ಡ್‌ ಗಾರ್ಡನ್‌, ಟ್ರಿನಿಟಿ ವೃತ್ತ, ಎಂ.ಜಿ.ರೋಡ್‌.
ಯಾವಾಗ?: ಡಿ. 14, ಶನಿವಾರ‌ ಬೆಳಗ್ಗೆ 11
ಪ್ರದರ್ಶನದ ಸಮಯ: ಡಿ.14-28, ಬೆಳಗ್ಗೆ 10-6
ಪ್ರದರ್ಶನ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next