Advertisement

ಪಿಣರಾಯಿ ಭೇಟಿಗೆ ಹಿಂದೂ ಯುವ ಸೇನೆ ವಿರೋಧ

02:47 PM Feb 23, 2017 | Team Udayavani |

ಮಂಗಳೂರು: ಸಿಪಿಎಂನ ಸೌಹಾರ್ದ ಕರಾವಳಿ ರಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಆಹ್ವಾನಿಸಿರುವುದು ಹಾಗೂ ಅವರ ಮಂಗಳೂರು ಭೇಟಿಯನ್ನು ಮಂಗಳೂರು ಹಿಂದೂ ಯುವ ಸೇನೆ ಕೇಂದ್ರಿಯ ಮಂಡಳಿ ಖಂಡಿಸಿದೆ.

Advertisement

ಸಿಪಿಐಎಂ ಸರಕಾರದ ಆಡಳಿತದ ಅವಧಿಯಲ್ಲಿ ಕೇರಳದಲ್ಲಿ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಬೆಂಬಲಿಸಿದ ಅಲ್ಲಿನ ಸಿಎಂ ಮಂಗಳೂರು ಭೇಟಿಯನ್ನು ಜಿಲ್ಲಾಡಳಿತ ತತ್‌ಕ್ಷಣ ನಿಷೇಧಿಸಬೇಕು. ಇಲ್ಲದೇ ಇದ್ದಲ್ಲಿ ಫೆ. 25ರ ಹರತಾಳವನ್ನು ಹಿಂದೂ ಯುವ ಸೇನೆ ಬೆಂಬಲಿಸುತ್ತದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next