Advertisement

ಅಲ್ಪಸಂಖ್ಯಾಕ ಪದದ ಸಾಂವಿಧಾನಿಕ ಮರು ವ್ಯಾಖ್ಯಾನ ಆಗ್ರಹಿಸಿ ಸುಪ್ರೀಂ ಕೋರ್ಟಿಗೆ ಪಿಐಎಲ್‌

11:33 AM Jul 10, 2019 | Sathish malya |

ಹೊಸದಿಲ್ಲಿ : ಕೇಂದ್ರ ಸರಕಾರ 26 ವರ್ಷಗಳ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು ಮತ್ತು ಪಾರಸಿಗಳನ್ನು ಅಲ್ಪಸಂಖ್ಯಾಕರೆಂದು ಘೋಷಿಸಲಾಗಿದ್ದು ಈ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಬಿಜೆಪಿ ಸದಸ್ಯ ಹಾಗೂ ವಕೀಲ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಅವರು ಪಿಐಎಲ್‌ ದಾಖಲಿಸಿದ್ದಾರೆ.

Advertisement

1993ರ ಅಕ್ಟೋಬರ್‌ 23ರಂದು 1992ರ ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗ ಕಾಯಿದೆಯ ಸೆ.2(ಸಿ) ಅಡಿ ಹೊರಡಿಸಲಾಗಿದ್ದ ಈ ಅಧಿಸೂಚನೆಯನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಉಪಾಧ್ಯಾಯ ಅವರು ಪಿಐಎಲ್‌ ನಲ್ಲಿ ಒತ್ತಾಯಿಸಿದ್ದಾರೆ.

ಅಲ್ಪ ಸಂಖ್ಯಾಕ ಪದದ ಸಾಂವಿಧಾನಿಕ ಅರ್ಥ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next