Advertisement

ಮೂಡುಬೆಳ್ಳೆ: ಪಿಕಪ್‌ ಢಿಕ್ಕಿ; ಬೈಕ್‌ ಸವಾರ ಸಾವು

07:39 PM Feb 09, 2023 | Team Udayavani |

ಶಿರ್ವ: ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಯ ಕಡೆಗೆ ಹೊರಟಿದ್ದ ಬೈಕ್‌ ಸವಾರನಿಗೆ ಮೂಡುಬೆಳ್ಳೆಯ ಗಣಪನಕಟ್ಟೆ ಬಳಿ ಪಿಕಪ್‌ ವಾಹನ ಢಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಫೆ.9 ರಂದು ಬೆಳಿಗ್ಗೆ ನಡೆದಿದೆ.

Advertisement

ಕುಂಟಾಡಿ ಕಲ್ಯಾ ಕೆಂಪುಗುಡ್ಡೆ ನಿವಾಸಿ ಹರೀಶ್‌ನಾಯ್ಕ (36) ಮೃತಪಟ್ಟ ಬೈಕ್‌ ಸವಾರ.

ಉಡುಪಿಯ ಕಂಪೆನಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಫಿಟ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಹರೀಶ್‌ನಾಯ್ಕ ಮುಂಜಾನೆ ತನ್ನ ಹೊಸದಾಗಿ ಖರೀದಿಸಿದ ಮೋಟಾರ್‌ ಬೈಕ್‌ನಲ್ಲಿ ಮೂಡುಬೆಳ್ಳೆ-ಕಟ್ಟಿಂಗೇರಿ ಮಾರ್ಗವಾಗಿ ಮನೆಗೆ ತೆರಳುವ ವೇಳೆ ಗಣಪನಕಟ್ಟೆ ಬಳಿ ತಲಪುವಾಗ ಕಟ್ಟಿಂಗೇರಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಬರುತ್ತಿದ್ದ ಪಿಕಪ್‌ ವಾಹನ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಮೃತರ ತಂದೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next