Advertisement

ತೋಡಿನಲ್ಲಿ ಗಾಡಿ: ತೊರೆಯ ಪ್ರವಾಹಕ್ಕೆ ಕೊಚ್ಚಿಹೋದ ತೊಳೆಯಲು ನಿಲ್ಲಿಸಿದ್ದ ಪಿಕ್ ಅಪ್!

01:54 PM Aug 08, 2020 | keerthan |

ಉಪ್ಪಿನಂಗಡಿ: ತೊರೆ ಸಮೀಪ ತೊಳೆಯಲೆಂದು ನಿಲ್ಲಿಸಿದ್ದ ಪಿಕ್ ಅಪ್ ವಾಹನವೊಂದು ದಿಢೀರನೆ ಎದುರಾದ ಪ್ರವಾಹಕ್ಕೆ ಸಿಲುಕಿ ಸ್ವಲ್ಪ ದೂರ ಕೊಚ್ಚಿಹೋದ ಘಟನೆ ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಬಳಿ ಶನಿವಾರ ನಡೆದಿದೆ.

Advertisement

ನೆಲ್ಯಾಡಿ ಸಮೀಪದ ಕೊಲ್ಪೆ ಮೂಲದವರ ಪಿಕ್ ಅಪ್ ವಾಹನ ಇದಾಗಿದ್ದು, ತೊರೆಯ ನೀರಿನಲ್ಲಿ ವಾಹನ ತೊಳೆಯುತ್ತಿದ್ದರು. ಈ ವೇಳೆ ಹಠಾತ್ ಆಗಿ ನೀರು ಹೆಚ್ಚಾಗಿದ್ದು, ವಾಹನ ಹಲವು ಪಲ್ಟಿಯಾಗಿ ನೀರಿನ ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗಿದೆ.

ವಾಹನದಲ್ಲಿ ಯಾರೂ ಇರದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳದಲ್ಲಿದ್ದ ಇತರ ವಾಹನಗಳ ಸಹಾಯದಿಂದ ಪಿಕ್ ಅಪ್ ವಾಹನವನ್ನು ಹೊರತೆಗೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next