Advertisement

ಚಾಲಕನ ನಿದ್ದೆ ಮಂಪರು, ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ವಾಹನ: ತಪ್ಪಿದ ಭಾರಿ ದುರಂತ

10:02 AM Mar 04, 2020 | keerthan |

ಉಳ್ಳಾಲ: ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಬಳಿಯ  ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ವಾಹನ ಸೇತುವೆಯಿಂದ ಮೇಲೆ ನಿಂತ ಕಾರಣದಿಂದ ಬಹುದೊಡ್ಡ ದುರಂತ ಅದೃಷ್ಟಶವಾತ್ ತಪ್ಪಿದೆ. ಸೇತುವೆ ಕೆಳಗೆ ಹಲವು ಅಡಿಗಳಷ್ಟು ಆಳವಿರುವ ಕಾರಣ ಒಂದು ವೇಳೆ ವಾಹನ ಕೆಳಗೆ ಬಿದ್ದಿದ್ದರೆ ದುರಂತ ನಡೆಯುವ ಸಂಭವ ಅಧಿಕವಾಗಿತ್ತು.

ಘಟನೆಯಲ್ಲಿ ವಾಹನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ನಾಗುರಿ ಸಂಚಾರಿ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next