Advertisement
ಒಂದು ವೇಳೆ ಉದ್ಯಮವೊಂದು ಆಧಾರ್ ಸಲ್ಲಿಸುವಲ್ಲಿ ವಿಫಲವಾದರೆ, ಅಧಿಕಾರ ವರ್ಗವು ಆ ಉದ್ಯಮಗಳ ಕಚೇರಿಯ ಭೌತಿಕ ದೃಢೀಕರಣ ಮಾಡಬೇಕು. ಒಂದು ವೇಳೆ ಇದರಲ್ಲಿ ಅಡ್ಡಿಗಳು ಎದುರಾದರೆ, ಆ ಕಂಪನಿಯಿಂದ ಹೆಚ್ಚುವರಿ ದಾಖಲೆಗಳನ್ನು ಪಡೆದು ಜಿಎಸ್ಟಿ ನೋಂದಣಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸಿಬಿಐಸಿ ಹೇಳಿದೆ. ಈ ನವ ನಿಯಮದಿಂದಾಗಿ ಜಿಎಸ್ಟಿ ನೋಂದಣಿ ಮಾಡಿಸುವ ಉದ್ಯಮಗಳ ಪ್ರಾಮಾಣಿಕತೆ, ನಕಲಿ ಬಿಲ್ಗಳನ್ನು ತಡೆಯುವುದು ಮತ್ತು ಟ್ಯಾಕ್ಸ್ ಕ್ರೆಡಿಟ್ಸ್ನಲ್ಲಿ ವಂಚನೆಯಾಗದಂತೆ ಖಾತ್ರಿಪಡಿಸಲು ಸಾಧ್ಯವಾಗಲಿದೆ. ಇನ್ನು ಇದೇ ವೇಳೆಯಲ್ಲೇ ಪ್ರಾಮಾಣಿಕ ಉದ್ಯಮಗಳ ಸುಗಮ ವ್ಯವಹಾರವನ್ನೂ ಇದು ಖಾತ್ರಿಪಡಿಸಲಿದೆ ಎಂದು ಸಿಬಿಐಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Advertisement
ಆಧಾರ್ ದೃಢೀಕರಿಸದಿದ್ರೆ ಭೌತಿಕ ಪರಿಶೀಲನೆ
12:06 AM Dec 01, 2020 | mahesh |
Advertisement
Udayavani is now on Telegram. Click here to join our channel and stay updated with the latest news.