Advertisement

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

07:53 PM Sep 16, 2024 | Shreeram Nayak |

ಶಿವಮೊಗ್ಗ:ರಾಜ್ಯದಲ್ಲಿ ಗಣಪತಿ ಉತ್ಸವದ ಸಂದರ್ಭದಲ್ಲಿ ಅಲ್ಲಲ್ಲಿ ಗಲಭೆ ಉಂಟು ಮಾಡುವ ಕೆಲಸ ರಾಷ್ಟ್ರದ್ರೋಹಿ ಮುಸಲ್ಮಾನರು ಮಾಡುತ್ತಿದ್ದಾರೆ. ಇದಕ್ಕೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರದ್ರೋಹಿ ಮುಸಲ್ಮಾನರು ಬೆಳೆಯುತ್ತಿದ್ದಾರೆ. ನಾಗಮಂಗಲದಲ್ಲಿ ನಡೆದ ಘಟನೆ ಎಲ್ಲರೂ ಗಮನಿಸಬೇಕು.

ಚೆಲುವರಾಯಸ್ವಾಮಿ ಮೊದಲು ಕಲ್ಲು ಹೊಡೆದವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್‌ ಬಾಂಬ್‌ ಹಾಗೂ ತಲ್ವಾರ್‌ ಹಿಂದೂ ಸಮಾಜ ಬಳಸಲ್ಲ. ಇದನ್ನು ಚೆಲುವರಾಯಸ್ವಾಮಿ ಗಮನಿಸಬೇಕು. ಕೇರಳದಿಂದ ಬಂದಿರುವ ರಾಷ್ಟ್ರದ್ರೋಹಿ ಮುಸಲ್ಮಾನರು ಈ ಕೆಲಸ ಮಾಡುತ್ತಿದ್ದಾರೆ.

ಎಲ್ಲಾ ಮುಸಲ್ಮಾನರು ಈ ರೀತಿ ಮಾಡಲ್ಲ. ಆದರೆ ರಾಷ್ಟ್ರದ್ರೋಹಿ ಮುಸಲ್ಮಾನರು ಈ ರೀತಿ ಮಾಡುತ್ತಿದ್ದಾರೆ. ಇದರಲ್ಲಿ ವಿದೇಶಿ ಸಂಚಿದೆ. ಇದನ್ನು ರಾಜ್ಯದ ನಾಯಕರು ಗಮನಿಸಬೇಕು. ಈಗಾಗಲೇ ಪ್ರಧಾನಿ ಇದನ್ನು ಖಂಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next