Advertisement

ಪೆರ್ನೆಂ ಸುರಂಗ ಮಾರ್ಗ ದುರಸ್ತಿ; ರೈಲು ಸಂಚಾರ ಸುಗಮ

01:16 AM Sep 17, 2020 | mahesh |

ಮಂಗಳೂರು: ಕೊಂಕಣ ರೈಲ್ವೇಯ ಕಾರವಾರ ವ್ಯಾಪ್ತಿಯ ಪೆರ್ನೆಂ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಸಂಚಾರಕ್ಕೆ ಯೋಗ್ಯ ಪ್ರಮಾಣ ಪತ್ರ ನೀಡಲಾಗಿದ್ದು ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಸುಗಮಗೊಂಡಿದೆ.

Advertisement

ರೈಲು ಸಂಖ್ಯೆ 02617 ಎರ್ನಾಕುಳಂ ಜಂಕ್ಷನ್‌-ಹಜ್ರತ್‌ ನಿಜಾಮುದ್ದೀನ್‌ ವಿಶೇಷ ಎಕ್ಸ್‌ಪ್ರೆಸ್‌ ಸೆ. 15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್‌-ರೋಹಾ – ಕಲ್ಯಾಣ್‌ ಮೂಲಕ ಸಂಚಾರ ಆರಂಭಿಸಿದೆ. ನಂ. 02618 ನಿಜಾಮುದ್ದೀನ್‌- ಎರ್ನಾ ಕುಳಂ ವಿಶೇಷ ಎಕ್ಸ್‌ಪ್ರೆಸ್‌ ಸೆ. 15 ರಿಂದ ಕಲ್ಯಾಣ್‌-ಮಂಗಳೂರು ಜಂಕ್ಷನ್‌ ಮೂಲಕ ಸಂಚಾರ ಆರಂಭಿಸಿದೆ.

ನಂ.02284 ನಿಜಾಮುದ್ದೀನ್‌ ಎರ್ನಾಕುಳಂ ಜಂಕ್ಷನ್‌ ದುರಂತೊ ವಿಶೇಷ ಎಕ್ಸ್‌ಪ್ರೆಸ್‌ ಎ.19ರಿಂದ ವಸಾಯ್‌ ರೋಡ್‌- ಮಂಗಳೂರು ಜಂಕ್ಷನ್‌ ಮೂಲಕ ಸಂಚರಿಸುತ್ತಿದೆ. ನಂ.02283 ಎರ್ನಾಕುಳಂ ಜಂಕ್ಷನ್‌-ಹಜ್ರತ್‌ ನಿಜಾಮುದ್ದೀನ್‌ ದುರಂತೊ ಎಕ್ಸ್‌ಪ್ರೆಸ್‌ ಸೆ. 22ರಿಂದ ಮಂಗಳೂರು ಜಂಕ್ಷನ್‌-ಮಡಗಾಂವ್‌-ರೋಹಾ-ಪನ್ವೇಲ್‌-ವಸಾಯ್‌ ರೋಡ್‌ ಮೂಲಕ ತೆರಳಲಿದೆ.

ನಂ.02432/02431 ಹೊಸ ದಿಲ್ಲಿ-ತಿರುವನಂತಪುರ ಸೆಂಟ್ರಲ್‌-ಹೊಸದಿಲ್ಲಿ ರಾಜಧಾನಿ ವಿಶೇಷ ರೈಲು ಸೆ.16ರಿಂದ ಸೇವೆಗಳನ್ನು ಆರಂಭಿಸಿದೆ. ನಂ.06345/06346 ಲೋಕಮಾನ್ಯ ತಿಲಕ್‌ ಟರ್ಮಿನಲ್‌-ತಿರುವನಂತಪುರಂ-ಲೋಕಮಾನ್ಯ ತಿಲಕ್‌ ಟರ್ಮಿನಲ್‌ ವಿಶೇಷ ರೈಲು ಸೆ.16ರಿಂದ ಸೇವೆ ಪ್ರಾರಂಭಿಸಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next