Advertisement

Pernankila Temple; ಮನದಲ್ಲಿ ಭಕ್ತಿ ಇದ್ದರೆ ಮನೆ ದೇವಾಲಯ: ಪೇಜಾವರ ಶ್ರೀ

01:03 AM Mar 26, 2024 | Team Udayavani |

ಉಡುಪಿ: ದೇವಸ್ಥಾನದಲ್ಲಿ ಭಗವಂತನ್ನು ಬಗೆಬಗೆಯಿಂದ ಆರಾಧಿಸುತ್ತೇವೆ. ಮನದಲ್ಲಿ ಭಕ್ತಿ ಭರಿತವಾಗಿ ಮನೆಗೆ ತೆರಳಬೇಕು. ಆಗ ಮನೆಯು ದೇವಾಲಯವಾಗುವುದರೊಂದಿಗೆ ಶಾಂತಿ, ನೆಮ್ಮದಿ, ಆರೋಗ್ಯ, ಧನ-ಕನಕಗಳು ವೃದ್ದಿಯಾಗುತ್ತವೆ. ಬೇರೆ ಜಿಲ್ಲೆ, ರಾಜ್ಯಗಳಿಂದ ಬಹಳಷ್ಟು ಭಕ್ತರು ಪೆರ್ಣಂಕಿಲಕ್ಕೆ ಆಗಮಿಸಿದ್ದಾರೆ ಅವರೆಲ್ಲರಿಗೂ ಇಲ್ಲಿನ ಆರಾಧ್ಯ ದೇವರು ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಒಳಿತನ್ನು ಮಾಡಲಿ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

Advertisement

ಮಾ. 24ರಂದು ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಾಲಯದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್‌ ಹರಿದಾಸ್‌ ಭಟ್‌ ಅಧ್ಯಕ್ಷತೆ ವಹಿಸಿದರು. ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್‌, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್‌, ಸಮಿತಿ ಸಂಘಟನ ಕಾರ್ಯದರ್ಶಿ ಸದಾನಂದ ಪ್ರಭು, ಉಪಾಧ್ಯಕ್ಷ ಶ್ರೀಕಾಂತ್‌ ನಾಯಕ್‌ ಅಲೆವೂರು, ಪ್ರಮುಖರಾದ ಸುರೇಶ್‌ ತಂತ್ರಿ, ಮಹೇಶ್‌ ಕುಲಕರ್ಣಿ, ಕಿಶೋರ್‌ ನಾಯಕ್‌, ಬಾಳು ವಾಗ್ಲೆ, ಸತೀಶ್‌ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್‌ ನಾಯಕ್‌ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next