Advertisement

62 ಹಾಸ್ಟೆಲ್‌ಗೆ ಖಾಯಂ ವಾರ್ಡನ್ ಹುದ್ದೆ ಖಾಲಿ ;ಸಿಸಿಟಿವಿ ನಿರ್ವಹಣೆಯಲ್ಲಿಯೂ ವಿಫಲ

12:29 AM Jul 17, 2023 | Team Udayavani |

ಕೊರಟಗೆರೆ: ಕೊರಟಗೆರೆ ಪಟ್ಪಣದ ಬಾಲಕಿಯರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯನ್ನ ತಡರಾತ್ರಿ ಆಟೋ ಹತ್ತಿಸಿಕೊಂಡು ಹೋಗಿದ್ದ ದುಗ್ಗೆನಹಳ್ಳಿಯ ಆಟೋಚಾಲಕ ಆರ್ಯಗೌಡ(24) ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೋಕಾಯ್ದೆ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ ನಾಯ್ಡು, ಕೊರಟಗೆರೆ ಪಿಎಸೈ ಚೇತನಗೌಡ ಭೇಟಿ ನೀಡಿ ತನಿಖೆಯನ್ನು ಇನ್ನಷ್ಟು ಚುರುಕು ಗೊಳಿಸಿದ್ದಾರೆ.

Advertisement

ಕಲ್ಪತರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 102 ಹಾಸ್ಟೆಲ್‌ಗಳಲ್ಲಿ 40 ಕಡೆ ಮಾತ್ರ ಖಾಯಂ ವಾರ್ಡನ್‌ಗಳ ನೇಮಕವಾಗಿದೆ. ಬರೋಬ್ಬರಿ 62 ವಸತಿ ನಿಲಯಗಳ ವಾರ್ಡನ್ ಹುದ್ದೆಯೇ ಖಾಲಿ ಇದೆ.102 ವಸತಿ ಶಾಲೆಗಳಿಗೆ ಕಾವಲುಗಾರನ ನೇಮಕ ಇದ್ದರೂ ಭದ್ರತೆಯೇ ಮರೀಚಿಕೆಯಾಗಿದೆ. ನಿಲಯದ ಕಟ್ಟಡಗಳಲ್ಲಿ ನೆಪಮಾತ್ರಕ್ಕೆ ಸಿಸಿಟಿವಿ ಲಭ್ಯವಿದ್ದರೂ ನಿರ್ವಹಣೆಯೇ ಇಲ್ಲದಾಗಿ ಭಯವೇ ಇಲ್ಲದಾಗಿದೆ.

ತುಮಕೂರು ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ೧೦೨ ವಸತಿ ನಿಲಯಗಳಿವೆ. ಸರಕಾರಿ ಮೆಟ್ರಿಕ್ ನಂತರದ ಮತ್ತು ಪೂರ್ವದ 102 ವಸತಿ ಶಾಲೆಗಳಲ್ಲಿ 62 ಕಡೆ ಖಾಲಿಯಿವೆ. ವಾರ್ಡನ್ ಮತ್ತು ಕಾವಲಗಾರನ ಕೊರತೆಯಿಂದ ನಿರ್ವಹಣೆಗೆ ಸಮಸ್ಯೆಯಾಗಿದೆ.

ವಾರ್ಡನ್ ಇಲ್ಲದಿರುವ ವಸತಿ ಶಾಲೆಗಳ ನಿರ್ವಹಣೆಗೆ ಎರಡು ಕಡೆ ಒಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನೂ ಕೇಲವು ಕಡೆ ಇಲಾಖೆಯ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ವಾರ್ಡನ್ ನೇಮಕಾತಿ ಕೊರತೆಯಿಂದ ಸ್ಥಳೀಯವಾಗಿ ಪ್ರತಿನಿತ್ಯ ಸಮಸ್ಯೆಗಳ ಸರಮಾಲೆಯೇ ಉದ್ಬವಿಸುತ್ತಿವೆ. ಅಧಿಕಾರಿಗಳ ಭಯವೇ ವಿದ್ಯಾರ್ಥಿಗಳಿಗೆ ಇಲ್ಲದೇ ತಡರಾತ್ರಿ ಇಂತಹ ದುರ್ಘಟನೆ ನಡಿಯೋದು ಸರ್ವೇ ಸಾಮಾನ್ಯ ಎಂಬುದು ಸ್ಥಳೀಯರ ಮಾತಾಗಿದೆ.

ಹಾಸ್ಟೆಲ್ ಗೆ ಜಂಟಿ ನಿರ್ದೇಶಕ ಭೇಟಿ
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಸ್ಟೇಲ್‌ಗೆ ಬೇಟಿನೀಡಿ ಮೆಟ್ರಿಕ್ ಪೂರ್ವ ಮತ್ತು ನಂತರದ ನಿಲಯದ ವಾರ್ಡನ್, ಕಾವಲುಗಾರಿಗೆ ನೋಟಿಸ್ ಜಾರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ನ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಸಿಸಿಟಿವಿ ನಿರ್ವಹಣೆ ಮತ್ತು ರಾತ್ರಿ ಪಾಳೇಯದ ಲೋಪಗಳ ಬಗ್ಗೆ ಮಾಹಿತಿ ಕಲೆಹಾಕಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Advertisement

358 ವಿದ್ಯಾರ್ಥಿಗಳ ರಕ್ಷಣೆ ಯಾರದ್ದು..?
ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ-50, ಬಾಲಕರ ವಿದ್ಯಾರ್ಥಿ ನಿಲಯ-70, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ-90, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-90 ಮತ್ತು ಅಕ್ಕಿರಾಂಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-58 ಜನ ಸೇರಿ ಒಟ್ಟು358 ಮಂದಿ ವಿದ್ಯಾರ್ಥಿಗಳ ಬಳಿಯು ಮೊಬೈಲ್ ಸೌಲಭ್ಯವಿದೆ. ತಡರಾತ್ರಿ 1 ಗಂಟೆವರೆಗೆ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಪರಿಣಾಮ ಇಂತಹ ಸಮಸ್ಯೆ ಸೃಷ್ಟಿ ಆಗುತ್ತಿವೆ. ಸರಕಾರ ಮತ್ತು ಇಲಾಖೆ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.

ನಿಲಯದ ಭದ್ರತೆ ಮತ್ತು ಕರ್ತವ್ಯ ಲೋಪ ಎಸಗಿದ ವಾರ್ಡನ್-ಕಾವಲುಗಾರ ಮೇಲೆ ಕ್ರಮ ಆಗುತ್ತದೆ. ಆರೋಪಿಯ ಮೇಲೆ ಪೋಕ್ಸೋ ಮತ್ತು ಅಕ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ನಿರ್ವಹಣೆ ಮತ್ತು ರಾತ್ರಿ ಪಾಳೇಯದ ಭದ್ರತೆಯ ಬಗ್ಗೆ ತನಿಖೆ ನಡೆಯುತ್ತೆ. ತುಮಕೂರು ಜಿಲ್ಲೆಯ 102 ಹಾಸ್ಟೆಲ್‌ನಲ್ಲಿ 62 ಕಡೆ ವಾರ್ಡನ್ ಹುದ್ದೆಯೇ ಖಾಲಿಯಿದೆ. ಹುದ್ದೆಭರ್ತಿಗೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ.
ಕೃಷ್ಣಪ್ಪ.ಎಸ್. ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next