Advertisement

ಕರಕುಶಲಗಳ ಪ್ರದರ್ಶನ-ಮಾರಾಟ

12:10 PM Dec 30, 2017 | Team Udayavani |

ಬಂಟ್ಸ್‌ಹಾಸ್ಟೆಲ್‌: ಕುಶಲಕರ್ಮಿಗಳಿಗೆ ಉತ್ತೇಜನ ನೀಡು ವುದರೊಂದಿಗೆ ಕರಕುಶಲ ರಂಗವನ್ನು ಬೆಳೆಸುವ ಉದ್ದೇಶದಿಂದ ಕರಕುಶಲ ಪ್ರದರ್ಶನ ಮೇಳಗಳನ್ನು ನಡೆಸಲಾಗುತ್ತಿದೆ. ಕುಶಲ ಕರ್ಮಿಗಳು ತಾವು ತಯಾರಿಸಿದ ವಸ್ತುಗಳನ್ನು ನೇರ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜ್‌ವಿರ್‌ ಪ್ರತಾಪ್‌ ಶರ್ಮ ತಿಳಿಸಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಜವುಳಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ನಿಗಮದ ವತಿಯಿಂದ ಮಂಗಳೂರಿನಲ್ಲಿ ಈ ಮೇಳ ಜ. 3ರವರೆಗೆ ನಡೆಯಲಿದೆ. ರಾಷ್ಟ್ರ ಮತ್ತು ರಾಜ್ಯದ ವಿವಿಧೆಡೆಗಳಿಂದ 50 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದಾರೆ. ಇಂತಹ ಪ್ರದರ್ಶನ-ಮಾರಾಟ ವ್ಯವಸ್ಥೆ
ಯಿಂದಾಗಿ ಕರಕುಶಲ ಉತ್ಪನ್ನಗಳನ್ನು ಜನತೆಗೆ ಪರಿಚಯಿಸುವುದರೊಂದಿಗೆ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶವೂ ಇದೆ ಎಂದರು.

ಪ್ರದರ್ಶನ-ಮಾರಾಟವು ಉದ್ಘಾಟನೆಗೊಂಡಿತು. ಕಾರ್ಪೋರೇಟರ್‌ ಎ. ಸಿ. ವಿನಯರಾಜ್‌, ನಿಗಮದ ಪ್ರಧಾನ
ವ್ಯವ ಸ್ಥಾಪಕ (ಮಾರುಕಟ್ಟೆ) ಮಹಮ್ಮದ್‌ ಸಲಾವುದ್ದೀನ್‌, ಕೆಎಸ್‌ಎಚ್‌ಡಿಸಿಎಲ್‌ ನಿರ್ದೇಶಕಿ ರಾಜೀವಿ ಆರ್‌. ರೈ, ಸಂಸ್ಥೆಯ ಅಧಿಕಾರಿ ಜಗದೀಶ್‌, ಮಂಜುನಾಥ್‌ ಮತ್ತಿತರರಿದ್ದರು. ಜ. 3 ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next