Advertisement

ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ: ಸೀತಾರಾಮ ಕೆದ್ಲಾಯ

01:00 AM Mar 09, 2019 | Team Udayavani |

ಕುಂದಾಪುರ: ಶಿಕ್ಷಣವು ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯವನ್ನು ಪ್ರತಿನಿಧಿಸುವ ಗುರುತ್ವವನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ಪರಿಪೂರ್ಣ ಮಾನವರನ್ನಾಗಿ ಮಾಡುವ ಪ್ರಮುಖ ಮಾಧ್ಯಮ ಶಿಕ್ಷಣ. 

Advertisement

ಆದರೆ ಶಿಕ್ಷಣದ ಮೂಲ ಉದ್ದೇಶವನ್ನೇ ಮರೆತು ಕೇವಲ ಅಂಕಗಳನ್ನು ಮತ್ತು  ವೃತ್ತಿಪರತೆಯನ್ನು ಬೆಳೆಸುವ ಮಾಧ್ಯಮವಾಗಿರುವುದು ವಿಷಾದದ ಸಂಗತಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪರಿಚಾರಕ ಸೀತರಾಮ ಕೆದ್ಲಾಯ ಹೇಳಿದರು.

ಅವರು ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಯೋಗ ವಿಜ್ಞಾನ, ಆಹಾರ ವಿಜ್ಞಾನ ಮತ್ತು ಭಾಷಾ ವಿಜ್ಞಾನ ಅತ್ಯಂತ ಕ್ರಮಬದ್ಧವಾದ ಪದ್ಧತಿಗೆ ಉದಾಹರಣೆ. ಇಂತಹ ಶಿಕ್ಷಣನಮ್ಮ ಮಕ್ಕಳಿಗೆ ನೀಡಿದರೆ ವಿದ್ಯಾರ್ಥಿಗಳು ಭಾರತೀಯತೆಯ ಪ್ರಾಮುಖ್ಯ ಅರಿತುಕೊಳ್ಳಲು, ಜೀವನದಲ್ಲಿ ರೂಢಿಸಿಕೊಳ್ಳಲು ಸಾಧ್ಯ ಎಂದರು. 

ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್‌. ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಅರವಿಂದ ಮರಳಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next