Advertisement

ಕರಿಮೆಣಸು ಸೊರಗದಂತೆ ತಡೆಯಿರಿ

01:05 AM Apr 14, 2019 | mahesh |

ಮಲೆನಾಡು ಪ್ರದೇಶದಲ್ಲಿ ಮಿಶ್ರ ಬೆಳೆಯಾಗಿ ಕರಿಮೆಣಸು ಕೂಡ ಬೆಳೆಗಾರರ ತೋಟದ ಮಧ್ಯೆ ವಿಸ್ತರಣೆಯನ್ನು ಕಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಗ ಸೇರಿದಂತೆ ವಿವಿಧ ಕಾರಣಗಳಿಂದ ಕರಿಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಗಾಲದ ಆರಂಭದಲ್ಲಿ ಒಂದಷ್ಟು ಸುರಕ್ಷ ಕ್ರಮಗಳನ್ನು ಕೈಗೊಂಡರಷ್ಟೇ ಕರಿಮೆಣಸು ಕೈಹಿಡಿಯುತ್ತದೆ.

Advertisement

ಕರಿಮೆಣಸಿನಂತಹ ವಾಣಿಜ್ಯ ಬೆಳೆಯಲ್ಲಿ ಒಂದು ವರ್ಷ ಕಡಿಮೆಯಾದರೂ ಮತ್ತೂಂದು ವರ್ಷ ಇಳುವರಿ ಸಿಗುತ್ತದೆ. ಇದರ ನಡುವೆ ಫಸಲು ಬರುವ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿರುವುದು ಕೆಲವು ತೋಟಗಳಲ್ಲಿ ಕಂಡು ಬರುತ್ತಿವೆ. ಇನ್ನು ಕೆಲವೆಡೆ ಬಳ್ಳಿ ಒಣಗಿ ಫಸಲು ಉದುರುತ್ತಿದೆ. ಕರಿಮೆಣಸಿಗೆ ತಗುಲುವ ಸೊರಗು ರೋಗ ಇಳುವರಿ ಅಧಿಕ ಕಂಡುಬಂದ ಸಮಯದಲ್ಲಿ ಈ ಸೊರಗು ರೋಗ ಬೆಳೆಗಾರರನ್ನು ಕಾಡುತ್ತಿದೆ.

ಶೀಘ್ರ ಹರಡುವ ರೋಗ
ಕೇರಳ ರಾಜ್ಯದ ವಯನಾಡು ಭಾಗದಲ್ಲಿ 1920ರ ಅವಧಿಯಲ್ಲಿ ಕಾಣಿಸಿಕೊಂಡ ಈ ರೋಗ 1990ರ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲೂ ಕಾಣಿಸಿಕೊಂಡಿತ್ತು. ಆ ಬಳಿಕ ಇಲ್ಲಿ ತೀವ್ರವಾಗಿ ಹರಡಿದ್ದರೂ, ಇಲ್ಲಿಯವರೆಗೂ ಇದನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಬೆಳೆಗಾರರನ್ನು ಈ ರೋಗ ನಿರಂತರವಾಗಿ ಕಾಡುವುದು, ನಷ್ಟ ಅನುಭವಿಸುವುದು ನಿರಂತರವಾಗಿದೆ. ಈ ರೋಗ ಶೀಘ್ರವಾಗಿ ಹರಡುತ್ತದೆ. ಬಳ್ಳಿಯನ್ನು ನೆಟ್ಟು ಗೊಬ್ಬರ ಹಾಕಿ ಫಸಲು ಬರುವ ವೇಳೆಗೆ ಅಥವಾ ಫಸಲು ಬಂದ ಬಳಿಕ ರೋಗಕ್ಕೆ ತುತ್ತಾಗಿ ನಾಶವಾಗಿಬಿಡುತ್ತದೆ.

ರೋಗ ಗುರುತಿಸಬೇಕು
·  ಕರಿಮೆಣಸು ಬಳ್ಳಿಗೆ ಸೊರಗು ರೋಗ ಬಂದರೆ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತವೆ.
·  ಬಳ್ಳಿ ಒಣಗಿ ಫಸಲು ಉದುರುತ್ತದೆ.
·  ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿ ಬೋರಲಾಗಿ ಸತ್ತು ಹೋಗುತ್ತದೆ.
·  ಮರವೊಂದರ ಬುಡಕ್ಕೆ ಬಳ್ಳಿನೆಟ್ಟು ಗೊಬ್ಬರ ಹಾಕಿದರೂ ಪ್ರಯೋಜನವಾಗುವುದಿಲ್ಲ.
ಹೀಗೆ ಹರಡುತ್ತದೆ
·  ಈ ರೋಗ ಪೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ಶಿಲೀಂಧ್ರ ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ಅನಂತರ ಬಳ್ಳಿ, ಎಲೆಯನ್ನು ಆಕ್ರಮಿಸುತ್ತದೆ. ಮಳೆಗಾಲದಲ್ಲಿ ಮಳೆ ಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂಧ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೂಂದು ಗಿಡಕ್ಕೆ ಹರಡುತ್ತದೆ. ಮೆಲೋಯೆಯೋಗೈನ್‌ ಇಂಕಾಗ್ನಿಟ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ.
·  ಈ ಕುರಿತ ಸಂಶೋಧನೆಯ ಪ್ರಕಾರ ರೋಗವನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಿಲ್ಲವಾದರೂ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ತಡೆಗಟ್ಟುವ ವಿಧಾನ
·  ತೋಟದೊಳಗೆ ಮಣ್ಣಿನ ತೇವಾಂಶ ಕಡಿಮೆಗೊಳಿಸಿಬೇಕು
·  ಕೊಳೆತ ಎಳೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು
·  ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡುವುದರಿಂದ ಬಳ್ಳಿಯಿಂದ ಬಳ್ಳಿಗೆ ಹರಡುವ ರೋಗವನ್ನು ತಡೆಗಟ್ಟಬಹುದು.
·  ತೋಟದಲ್ಲಿ ಬಿಸಿಲು ಹಾಯಲು ಸೂಕ್ತವಾಗುವಂತೆ ಮರದ ನೆರಳನ್ನು ತೆಗೆಯಬೇಕು.
·  ರೋಗರಹಿತ ಪಾತಿಯಿಂದಲೇ ಆಯ್ದ ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು
·  ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು ಮೆಟಲಕ್ಸಿನ್‌ ಶಿಲೀಂಧ್ರ ನಾಶಕದ ಶೇ. 0.3 ದ್ರಾವಣದಿಂದ ತೋಯಿಸಬೇಕು.
·  ಮಳೆಗಾಲ ಆರಂಭವಾಗುವ ಮುನ್ನ ಶೇ. ಒಂದರ ಬೋಡೋì ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು.

Advertisement

ಔಷಧದಿಂದ ರಕ್ಷಣೆ
ಅಡಿಕೆ ಬೆಳೆಗಾರರು ಕೊಳೆರೋಗಕ್ಕೆ ಔಷಧ ಸಿಂಪಡಣೆ ಮಾಡುವ ಸಮಯದಲ್ಲಿ ಮಳೆಗಾಲದ ಆರಂಭದಲ್ಲಿ ಬೋಡೋì ದ್ರಾವಣವನ್ನು ಸಿಂಪಡಿಸಬೇಕು. ಟ್ರೈಕೋಡರ್ಮ್ ಔಷಧವನ್ನು ಕರಿಮೆಣಸು ಬಳ್ಳಿಯ ಪ್ರತಿ ಬುಡಕ್ಕೆ 50 ಗ್ರಾಂ ಸ್ವಲ್ಪ ಹಳೆಯದಾದ ಪುಡಿ ಪುಡಿ ಹಟ್ಟಿಗೊಬ್ಬರ ಅಥವಾ ಬೇವಿನ ಹಿಂಡಿ ಜತೆ ಬೆರೆಸಿ ಹಾಕಬೇಕು. ಇವನ್ನು ಮಿಶ್ರಣ ಮಾಡಿ 5 ದಿನಗಳ ಕಾಲ ಇಟ್ಟು ಮತ್ತೆ ಹಾಕಿದರೆ ಉತ್ತಮ ಎನ್ನುವುದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿರ್ದೇಶನ.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next