Advertisement

ಪತ್ರಿಕಾ ವಿತರಕರ ದಿನಾಚರಣೆ-ರಕ್ತದಾನ

01:42 PM Sep 06, 2021 | Team Udayavani |

ಹುಬ್ಬಳ್ಳಿ: ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ರವಿವಾರ ಇಲ್ಲಿನ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ಪತ್ರಿಕಾ ವಿತರಕರು ರಕ್ತದಾನ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಕ್ತನಿಧಿ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ,ಆರೋಗ್ಯವಂತವರು ಕಾಲ ಕಾಲಕ್ಕೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತಿದೆ.

Advertisement

ಇದರಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯದ ಕೆಲಸಮಾಡಿದಂತೆ. ಇತ್ತೀಚಿನ ದಿನಗಳಲ್ಲಿ ಕೃತಕ ವಸ್ತುಗಳನ್ನುತಯಾರಿಸಲಾಗುತ್ತಿದೆ. ಆದರೆ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಇನ್ನೊಬ್ಬರ ದಾನದಿಂದ ಮಾತ್ರಮತ್ತೂಬ್ಬರ ಜೀವ ಉಳಿಸಬಹುದಾಗಿದೆ. ಇಂತಹವಿಶೇಷ ಸಮಾರಂಭಗಳನ್ನು ಸಮಾಜ ಮುಖೀಯಾಗಿ ಆಚರಣೆ ಮಾಡುತ್ತಿರುವುದು ಸಂತಸ ವಿಚಾರ ಎಂದರು.

ಅಧ್ಯಕ್ಷ ಸಿ.ಎಸ್‌.ಹಿರೇಮಠ ಮಾತನಾಡಿ, ಪತ್ರಿಕಾವಿತರಕರು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂತಮ್ಮ ಕಾಯಕ ಮರೆಯೋದಿಲ್ಲ. ಈ ಬಾರಿಯಪತ್ರಿಕಾ ವಿತರಕರ ದಿನಾಚರಣೆಯನ್ನು ಸಾಮಾಜಿಕಕಾಳಜಿಯೊಂದಿಗೆ ಆಚರಿಸಬೇಕು ಎಂದು ನಿರ್ಧರಿಸಿ ರಕ್ತದಾನ ಮಾಡಲಾಗುತ್ತಿದೆ.

ಮುಂದೆ ಇಂತಹ ಹಲವುಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದರು.ಸಂಘದ ಪ್ರಕಾಶ ಝಪಾಟೆ, ಶಿವಾಜಿ ತಡಸದ, ಆರ್‌.ಸಿ.ಜಿತೂರಿ, ಗಿರಿಧರ ದಿವಟೆ, ಮನೋಹರ ಪರ್ವತಿ,ವಿನಯ ಢಗೆ, ಹನುಮಂತ ಸುಣಗಾರ, ಶಂಕರಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next