Advertisement

ಕಳೆದ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಏರಿದೆ ಭಾರತದ ವಿಶ್ವ ಪ್ರತಿಷ್ಠೆ: ಜೈಶಂಕರ್‌

09:59 AM Jun 07, 2019 | Sathish malya |

ಹೊಸದಿಲ್ಲಿ : ಭಾರತದ ವಿಶ್ವ ಪ್ರತಿಷ್ಠೆ ಕಳೆದ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಎಂಬುದನ್ನು ದೇಶದ ಬಹುಪಾಲು ಜನರು ಪರಿಗಣಿಸುತ್ತಾರೆ ಎಂದು ನೂತನ ವಿದೇಶ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ.

Advertisement

ಇಂದಿಲ್ಲಿ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಅವರು, ಜಾಗತಿಕ ಪುನರ್‌ ಸಂತುಲನೆ ಈಗ ಆಗುತ್ತಿದೆ; ಇದಕ್ಕೆ ಚೀನ ದೈತ್ಯ ಶಕ್ತಿಯಾಗಿ ಹೊಮ್ಮಿರುವುದು ಮತ್ತು ಸ್ವಲ್ಪ ಮಟ್ಟಿಗೆ ಭಾರತವೂ ಶಕ್ತರಾಷ್ಟ್ರವಾಗಿ ವಿಜೃಂಭಿಸುತ್ತಿರುವುದು ಅತೀ ದೊಡ್ಡ ಪುರಾವೆಯಾಗಿದೆ ಎಂದು ಹೇಳಿದರು.

ರಾಜತಂತ್ರಜ್ಞನಾಗಿ ಉತ್ಕೃಷ್ಟ ವೃತ್ತಿಪರತೆಯನ್ನು ಸುದೀರ್ಘ‌ ಅವಧಿಯಲ್ಲಿ ಮೆರೆದಿರುವ ಜೈಶಂಕರ್‌ ಇದೀಗ ದೇಶದ ವಿದೇಶ ವ್ಯವಹಾರಗ ಸಚಿವರಾಗಿರುವುದು ಬಹಳ ಅಪರೂಪದ ನಿದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next