Advertisement

Karnataka ಕಾಂಗ್ರೆಸ್‌ ಸರಕಾರದ ವೈಫ‌ಲ್ಯ ಜನರು ನೋಡಿದ್ದಾರೆ: ಹರಿಯಾಣದಲ್ಲಿ ಮೋದಿ

01:31 AM Oct 04, 2024 | Team Udayavani |

ಚಂಡೀಗಢ: ಕರ್ನಾಟಕದ ಕಾಂಗ್ರೆಸ್‌ ಸರಕಾರದ ವೈಫ‌ಲ್ಯವನ್ನು ಜನ ನೋಡಿದ್ದಾರೆ. ಈ ಪಕ್ಷ ಎಂದಿಗೂ ಸ್ಥಿರವಾದ ಆಡಳಿತ ನೀಡಲಾಗದು ಎಂದು ಜನತೆಗೆ ಅರಿವಾಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಹರಿಯಾಣದಲ್ಲಿ ಚುನಾವಣೆ ಪ್ರಚಾರದ ಕಡೆಯ ದಿನವಾದ ಗುರುವಾರ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್‌ ಬರೀ ವಂಶಾ ಡಳಿತಕ್ಕೆ ಕುಮ್ಮಕ್ಕು ನೀಡುತ್ತದೆ, ಸಾಮಾನ್ಯ ಜನರ ಕಷ್ಟ ಆಲಿಸುವುದಿಲ್ಲ. ಈಗಾಗಲೇ ಹಿಮಾಚಲಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರಗಳ ವೈಫ‌ಲ್ಯ ಕಣ್ಣ ಮುಂದಿವೆ. ಕಾಂಗ್ರೆಸ್‌ ನೀತಿಗಳು ಜನರ ಬದುಕನ್ನು ನಾಶಗೊಳಿಸಿದೆ. ಹಾಗಾಗಿಯೇ ಜನರಿಗೆ ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಬೇಡವಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ ಮತದಾನ
ಚಂಡೀಗಢ: ಹರಿಯಾಣ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ಅ. 5ರಂದು ಚುನಾವಣೆ ನಡೆಯಲಿದ್ದು, 8,821 ಶತಾಯುಷಿಗಳು ಸೇರಿ 2 ಕೋಟಿ ಮಂದಿ ಮತ ಚಲಾಯಿಸಲಿದ್ದಾರೆ. 90 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ 3ನೇ ಬಾರಿ ಅಧಿಕಾರ ಕ್ಕೇರುವ ಭರವಸೆಯಲ್ಲಿದ್ದರೆ, ಕಾಂಗ್ರೆಸ್‌ ದಶಕದ ಬಳಿಕ ಗೆಲುವು ಪಡೆಯುವ ಕನಸು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next