Advertisement
ಹೊಳೆನರಸೀಪುರದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ದನ್ನು ಬಿಜೆಪಿ ಮುಖಂಡ ಆರ್. ಅಶೋಕ್ ಸೇರಿದಂತೆ ಹಲವರು ನಾಯಕರು ಟೀಕೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ ಅವರು ಕಳೆದ 60ವರ್ಷಗಳಿಂದ ರಾಜಕೀಯವ ಜೀವನದ ರಾಜಕೀಯ ಏರುಪೇರುಗಳನ್ನು ಕಂಡಿರುವ ಅವರು ತಮ್ಮ ಗ್ರಾಮದ ಸಮಕಾಲೀನರ ಸಹಾಯವನ್ನು ನೆನೆದು ಕಣ್ಣೀರು ಹಾಕಿದ್ದಾರೆ ವಿನಃ ಯಾವುದೇ ರಾಜಕೀಯ ಲಾಭಕ್ಕೆ ಕಣ್ಣೀರು ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಅಭಿವೃದ್ಧಿಗೆ ಅನುದಾನ: ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಬೇಲೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದೆ. ಬರಗಾಲ ಪೀಡಿತ ಪ್ರದೇಶ ಹಳೇಬೀಡು ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ದೇವೇಗೌಡರು ಮತ್ತು ರೇವಣ್ಣ ಶ್ರಮವಹಿಸಿ ರಣಘಟ್ಟ ವಡ್ಡಿನಿಂದ ನೀರಾವರಿ ಯೋಜನೆಗೆ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿರುವುದು ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ, ಲತಾಮಂಜೇಶ್ವರಿ. ಲತಾ, ರತ್ನಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ, ಸದಸ್ಯೆ ಕಮಲ, ಎಂಎಲ್ಸಿ ಧರ್ಮೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಟಾರಾಯ, ಯುವ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಸಿ.ಎಚ್.ಮಹೇಶ್, ಮುಖಂಡರಾದ, ಎಂ.ಎ.ನಾಗರಾಜ್. ಬಿ.ಡಿ.ಚಂದ್ರೇಗೌಡ, ಸಿ.ಎಸ್.ಪ್ರಕಾಶ್, ಟಿ.ಎ.ಶ್ರೀನಿಧಿ, ರವಿಕುಮಾರ್,ಚೇತನ್ಕುಮಾರ್, ಸುಬಾನ್ ಮೊದಲಾದವರಿದ್ದರು.
ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧೆ: ಜೆಡಿಎಸ್ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ದೇವೇಗೌಡರು ಸೇರಿದಂತೆ ತಮ್ಮ ಕುಟುಂಬದವರು ಯಾರು ನಾನು ರಾಜಕೀಯಕ್ಕೆ ಬರಬೇಕೆಂದು ಕರೆದಿರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದಿದ್ದೇನೆ. ಭಾವುಕನಾಗಿ ಕಣ್ಣೀರು ಹಾಕಿದ್ದು ನಿಜ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಕಣ್ಣೀರು ಹಾಕಿ ರಾಜಕೀಯ ಮಾಡುವ ಉದ್ದೇಶವಿಲ್ಲ.
ಜನರ ಪ್ರೀತಿ ಶ್ವಾಸದಿಂದ ನಾಯಕರಾಬೇಕೆ ಹೊರತು ಯಾವುದ ಕುತಂತ್ರದಿಂದ ರಾಜಕೀಯ ಬರುವುದಿಲ್ಲ. ರೈತರು ಮತ್ತು ವೀರ ಯೋಧರ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿಯವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಹೇಗೆ ಅವರಿಗೆ ಗೌರವ ನೀಡಬೇಕೆಂದು ನಮಗೂ ಗೊತ್ತು ಎಂದರು.
ರಾಜಕೀಯಕ್ಕೆ ಹೆದರಿ ಓಡಿ ಹೋಗೋಲ್ಲ: ದೇವೇಗೌಡರ ಕುಟುಂಬ ರಾಜಕೀಯಕ್ಕೆ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ, ಕಳೆದ 10ವರ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರೂ ಜನ ಸಾಮಾನ್ಯರೊಂದಿಗೆ ಅವರ ಸಮಸ್ಯೆಗಳನ್ನು ಅರಿತು ಕೈಲಾದ ಕೆಲಸ ಮಾಡಿದ್ದೇವೆ. ಅಂದು ಅಡಳಿತ ನಡೆಸಿದ ಪಕ್ಷಗಳು ಏನು ಮಾಡಿದ್ದಾವೆ ಎಂದು ಮತಯಾಚನೆ ಮಾಡುತ್ತಾರೆ. ಜನತೆಯ ಮುಂದೆ ಹೋಗಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಸಚಿವ ರೇವಣ್ಣ ಹೇಳಿದರು.