Advertisement

ಪೊಲೀಸರಿಗೆ ಕರೆ ಮಾಡಿ ಪಿಜ್ಜಾ ತಂದುಕೊಡ್ತೀರಾ? ಮೊಬೈಲ್‌ ರೀಜಾರ್ಜ್‌ ಮಾಡ್ತೀರಾ? ಕೇಳ್ತಾರೆ!

09:58 AM Sep 18, 2019 | Hari Prasad |

ಹೊಸದಿಲ್ಲಿ: ಜನರಿಗೆ ಉಪಯೋಗವಾಗಲಿ, ತುರ್ತು ಸಂದರ್ಭದಲ್ಲಿ ನೆರವಿಗೆ ಅಂತ ಪೊಲೀಸ್‌ ಹೆಲ್ಪ್ ಲೈನ್‌ ಅಂತ ಶುರುಮಾಡಿದ್ರೆ. ಈಗ ಪೊಲೀಸರಿಗೆ ಕೆಟ್ಟ ಕರೆಗಳಿಂದ ಸಾಕು ಸಾಕಾಗಿ ಹೋಗಿದೆ. ಇಂಥದ್ದೊಂದು ವಿಚಿತ್ರ ಸಮಸ್ಯೆಗೆ ಸಿಲುಕಿದ್ದು ದಿಲ್ಲಿ ಪೊಲೀಸರು.

Advertisement

ದಿಲ್ಲಿ ರೈಲ್ವೇ ನಿಲ್ದಾಣದಲ್ಲಿ ಹೆಲ್ಪ್ ಲೈನ್‌ ಶುರುಮಾಡಿದ್ದು, ಇದಕ್ಕೆ ಶೇ.80ರಷ್ಟು ಕರೆಗಳು ಮೊಬೈಲ್‌ ರೀಜಾರ್ಜ್‌ ಮಾಡಿಕೊಡಿ, ಇಂಟರ್ನೆಟ್‌ ಪ್ಯಾಕ್‌ ಖಾಲಿಯಾಗಿದೆ, ಪಿಜ್ಜಾ, ಬರ್ಗರ್‌ ತಂದ್ಕೊಡ್ತೀರಾ? ಸಿಮ್‌ ಲಾಕ್‌ ಆಗಿದೆ ಎನ್ನುವ ದೂರುಗಳೇ ಇರುತ್ತವಂತೆ.

ನಿತ್ಯ 200ರಷ್ಟು ಕರೆಗಳು ಬಂದರೆ ಅವುಗಳಲ್ಲಿ ಶೇ.80ರಷ್ಟು ಕರೆಗಳು ಅನಪೇಕ್ಷಿತ ಕರೆಗಳೇ. ಇದರಿಂದ ನೈಜ ದೂರಿನ ಕರೆಗಳಿಗೆ ಸ್ಪಂದಿಸುವುದು ಸವಾಲಾಗಿದೆ. ಅಷ್ಟೇ ಅಲ್ಲದೇ ಅನಪೇಕ್ಷಿತ ಕರೆಗಳಿಗೆ ಉತ್ತರಿಸುವುದೂ ಒಂದು ಸವಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೀಗೆ ಕೆಟ್ಟ, ಕೀಟಲೆ ಕರೆಗಳು ಗುರುಗ್ರಾಮ, ಗಾಜಿಯಾಬಾದ್‌ ಗಳಿಂದ ಹೆಚ್ಚಾಗಿ ಬರುತ್ತವಂತೆ. ಗ್ರಾಹಕರ ಸೇವಾ ಕೇಂದ್ರವಾದ್ದರಿಂದ ಅಲ್ಲಿನ ಸಿಬಂದಿ ಶಾಂತಚಿತ್ತರಾಗಿಯೇ ಕರೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಬೇಡಿಕೆಗಳನ್ನು ನಿರಾಕರಿಸುತ್ತಿದ್ದಾರಂತೆ. ಇದರಿಂದ ಪ್ರಯಾಣಿಕರ ದೂರುಗಳು ವಿಶೇಷವಾಗಿ ಕಳವು, ನಿಲ್ದಾಣದಲ್ಲಿ ಸಮಸ್ಯೆ, ಜಗಳ, ಕ್ರಿಮಿನಲ್‌ ಅಪರಾಧಗಳು ನಡೆದಾಗ ಕರೆಗಳು ಸ್ವೀಕರಿಸುವುದು ನಿಧಾನವಾಗುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next