Advertisement

ಜನಾಶೀರ್ವಾದ ಯಾತ್ರೆ ಮೂಲಕ ಜನರಿಗೆ ಕಿರಿಕಿರಿ : ಬಿಜೆಪಿ ಆರೋಪ

07:50 AM Mar 23, 2018 | Team Udayavani |

ಕಾಪು: ಜನಾಶೀರ್ವಾದ ಯಾತ್ರೆಯ ಹೆಸರಲ್ಲಿ ಕಾಂಗ್ರೆಸ್‌ ರಾಹುಲ್‌ ಗಾಂಧಿ ಕರಾವಳಿಯಾದ್ಯಂತ ನಡೆಸುತ್ತಿರುವ ರ್ಯಾಲಿಯಿಂದಾಗಿ ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಕಾಪು ಕ್ಷೇತ್ರ ಬಿಜೆಪಿ ಆರೋಪಿಸಿದೆ. 

Advertisement

ರಾಹುಲ್‌ ಗಾಂಧಿ ಪ್ರವಾಸದ ಹಿನ್ನೆಲೆಯಲ್ಲಿ ಪೊಲೀಸರು ಹೆದ್ದಾರಿಯುದ್ದಕ್ಕೂ ವಾಹನಗಳನ್ನು ತಡೆ ಹಿಡಿದಿದ್ದು ಇದರಿಂದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಅಂಬ್ಯುಲೆನ್ಸ್‌, ಶಾಲಾ ವಾಹನಗಳನ್ನು ಕೂಡಾ ತಡೆ ಹಿಡಿದಿದ್ದರಿಂದಾಗಿ ಅವರು ಪೇಚಾಟ ಅನುಭವಿಸಬೇಕಾಯಿತು. ದೂರದ ಊರಿನಿಂದ ಬರುವ ಸರಕು ವಾಹನಗಳನ್ನು ಗಂಟೆಗಟ್ಟಲೆ ತಡೆ ಹಿಡಿದಿದ್ದರಿಂದ ಅವರ ಸಮಯ ವ್ಯರ್ಥವಾಗುವಂತಾಗಿದೆ ಎಂದು ಬಿಜೆಪಿ ಹೇಳಿದೆ. ಇನ್ನು ಮುಂದಿನ ದಿನಗಳಲ್ಲಿ ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರ ಭೇಟಿ ಕಾರ್ಯಕ್ರಮ ನಡೆಯುವಾಗ ಪೊಲೀಸರು ಮೊದಲೇ ಸುಗಮ ಸಂಚಾರ ವ್ಯವಸ್ಥೆಗೊಳಿಸಲು ಪ್ರಯತ್ನಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಆಗ್ರಹಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next