Advertisement

ಅಪಪ್ರಚಾರ ಮಾಡುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ

12:31 PM Apr 30, 2018 | |

ಬೆಂಗಳೂರು: ಇಡೀ ಕ್ಷೇತ್ರ ನನ್ನ ಕುಟುಂಬ ಇದ್ದಂತೆ. ಜನ ನನ್ನನ್ನು ಬಿಟ್ಟುಕೊಡಲ್ಲ, ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ಜನರೇ ಸರಿಯಾದ ಉತ್ತರ ಕೊಡುತ್ತಾರೆ ಎಂದು ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆ ಅಭ್ಯರ್ಥಿ ಹಾಗೂ ಶಾಸಕ ಎನ್‌.ಎ.ಹ್ಯಾರಿಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Advertisement

ಭಾನುವಾರ ಜೋಗುಪಾಳ್ಯ, ಮೋಟಪ್ಪನ ಪಾಳ್ಯದಲ್ಲಿ ಮತ ಯಾಚನೆ ಮಾಡಿದ ಅವರು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ಶಾಂತಿ ನಗರ ಜನರ ಜತೆ ಬೆರೆತು ಕೆಲಸ ಮಾಡಿದ್ದೇನೆ. ಜನರು ಈಗಲೂ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ಎದುರಾಳಿಯಾಗಿ ಕಣಕ್ಕಿಳಿದವರಿಗೆ ಯಾವುದೇ ಸಿದ್ಧಾಂತವಿಲ್ಲ. ಒಂದೊಂದು ದಿನ ಒಂದೊಂದು ಪಕ್ಷ. ಒಂದು ಪಕ್ಷದಲ್ಲಿ ಟಿಕೆಟ್‌ ಸಿಕ್ಕಿಲ್ಲ ಎಂದು ಮತ್ತೂಂದು ಪಕ್ಷಕ್ಕೆ ಹೋದವರು. ಇವರನ್ನು ಜನ ಯಾವ ರೀತಿಯಲ್ಲಿ ನಂಬಬೇಕು ಎಂದು ಪ್ರಶ್ನಿಸಿದರು.

ಗುಡಿಸಲುಗಳ ಅಸ್ತಿತ್ವ ಕ್ಷೇತ್ರದ ದೊಡ್ಡ$ಸಮಸ್ಯೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ ಗುಡಿಸಲು ಮುಕ್ತ ಕ್ಷೇತ್ರವಾಗಿಸಿ, ಅಲ್ಲಿನ ನಿವಾಸಿಗಳಿಗೂ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ವಿವಿಧ ಯೋಜನೆಯಡಿ ವಸತಿ ನಿರ್ಮಾಣವಾಗಿದೆ. ಕ್ಷೇತ್ರ ವ್ಯಾಪ್ತಿಯ ಜೋಗುಪಾಳ್ಯದಲ್ಲಿ ಗುಡಿಸಲು ವಾಸಿಗಳಿಗೆ ಸಮೂಹ ವಸತಿ ಸೌಲಭ್ಯವನ್ನು ಕಲ್ಪಿಸುತ್ತಿದ್ದು, ಸುಮಾರು 1,520 ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಕೆಲಸ ಸಮರೋಪಾದಿಯಲ್ಲಿ ನಡೆದಿದೆ ಎಂದು ವಿವರಿಸಿದರು.

ಸಕಲ ಸೌಲಭ್ಯದೊಂದಿಗೆ ಸುಮಾರು 356 ಚದರ ಅಡಿ ಅಳತೆಯ ಮನೆಗಳನ್ನು ನಿರ್ಮಾಣ ಮಾಡಲಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಲ್ಲಿ ಸುಮಾರು 7,000 ಮನೆಗಳನ್ನು ನಿರ್ಮಿಸಲಾಗಿದೆ. ಏಷಿಯನ್‌ ಗೇಮ್ಸ್‌ ಸಂದರ್ಭದಲ್ಲಿ ಮನೆಯು ಮಂಜೂರಾದ ಪ್ರಕರಣದಲ್ಲಿ 1520 ಕಟುಂಬಗಳಿಗೆ ಮನೆ ಒದಗಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಅನ್ವಯ ಇದನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

Advertisement

ಚುನಾವಣೆ ಬಳಿಕ ಬಹುತೇಕರಿಗೆ ಹಕ್ಕುಪತ್ರ, ಮಂಜೂರಾತಿ ನೀಡಲಾಗುತ್ತದೆ. ಉಳಿದಂತೆ ಹೆಚ್ಚುವರಿಯಾಗಿ 900 ಜನರಿಗೆ ಸೂಳೆಗುಂಟೆಯಲ್ಲಿ ವಸತಿ ನಿರ್ಮಿಸಲು ಚಾಲನೆ ನೀಡಲಾಗುವುದು. ಅಲ್ಲಿಯೂ ಬಹುತೇಕ ಆರು ತಿಂಗಳಲ್ಲಿ ಮನೆ ಹಂಚಿಕೆ ಮಾಡುವ ಗುರಿ ಇದೆ.

1520 ಬಡ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ಕಟ್ಟುವುದೂ ಅವರಿಗೆ ಕಷ್ಟದ ಕೆಲಸ. ಇಂಥ ಸಂದರ್ಭದಲ್ಲಿ ಮನೆ ಹಂಚಿಕೆ ಆಗುವವರೆಗೆ ಅವರಿಗೆ ಬಾಡಿಗೆ ಮೊತ್ತ ಪಾವತಿಸಬೇಕು ಎಂದು ಮುಖ್ಯಮಂತ್ರಿಗೆ ನಾನು ಮನವಿ ಮಾಡಿದ್ದೇನೆ. ಅವರು ಸಹ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಎಲ್ಲ ಮಕ್ಕಳೂ ಶಾಲೆಗೆ ಹೋಗ್ತಾರೆ: ನಾವು ವರ್ಷ ಪೂರ್ತಿ ಜನರ ಪರ ಕೆಲಸ ಮಾಡಿಕೊಂಡೇ ಬಂದಿದ್ದೇವೆ. ಎದುರಾಳಿಗಳಿಂದ ಒಂದೇ ಒಂದು ಜನಪರ ಕೆಲಸವಿಲ್ಲ. ಶಾಂತಿ ನಗರದ ಜನ ಬುದ್ಧಿವಂತರು. ಎಲ್ಲವನ್ನೂ ಗಮನಿಸುತ್ತಾರೆ. ಬಡತನ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನಮ್ಮ ಕ್ಷೇತ್ರದಲ್ಲಿ ಎಲಾ ಮಕ್ಕಳು ಶಾಲೆಗೆ ಹೋಗುತ್ತಾರೆ. ಮಕ್ಕಳ ಕಲಿಕೆಗೆ ನಾನು ಪೂರಕ ವಾತಾವರಣ ಕಲ್ಪಿಸಿಕೊಟ್ಟಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next