Advertisement

ಬೇರೊಬ್ಬರ ಖಾತೆಗೆ ಪಿಂಚಣಿ: ಸಿಬ್ಬಂದಿಗೆ ನೋಟಿಸ್‌

03:32 PM Nov 06, 2022 | Team Udayavani |

ಕನಕಪುರ: ಫ‌ಲಾನುಭವಿಗಳ ಖಾತೆಗೆ ತಲುಪಬೇಕಾದ ಪಿಂಚಣಿ ಹಣವನ್ನು ಬೇರೊಂದು ಖಾತೆಗೆ ಪಾವತಿ ಮಾಡಿ ಕರ್ತವ್ಯ ಲೋಪವೆಸಗಿರುವ ಸಾಮಾಜಿಕ ಭದ್ರತಾ ಪಿಂಚಣಿ ಆಪರೇಟರ್‌ ರಘು ಎಂಬಾತನಿಗೆ ತಾಲೂಕು ಆಡಳಿತ ನೋಟಿಸ್‌ ನೀಡಿದೆ.

Advertisement

ತಾಲೂಕಿನ ನಿರ್ಮಲಾ ಕೋ. ಲೇಟ್‌ ಕೃಷ್ಣ ಎಂಬ ಫ‌ಲಾ ನುಭವಿಗೆ ಪಿಂಚಣಿ ಬಾರದೆ ನಿಂತುಹೋಗಿತ್ತು. ಫ‌ಲಾನುಭವಿ ಗಳು ನೀಡಿದ ದೂರಿನ ಮೇರೆಗೆ ಪಿಂಚಣಿ ತಂತ್ರಾಂಶದಲ್ಲಿ ಪರಿಶೀಲಿಸಲಾಗಿ ಫ‌ಲಾನುಭವಿ ನಿರ್ಮಲಾ ಅವರ ಖಾತೆ ಸಂಖ್ಯೆಯನ್ನು ಏ.25. 2019ರಲ್ಲಿ ಬದಲಾವಣೆ ಮಾಡಿ ಬೇರೊಬ್ಬರ ಖಾತೆಗೆ ಹಣ ಹಣ ಜಮೆಯಾಗಿರುವುದು ಕಂಡುಬಂದಿತ್ತು. ಅಲ್ಲದೆ ಇದು ಪುನರಾವರ್ತನೆಯಾಗಿ ಮೇ 01ರಂದು ಮತ್ತೂಮ್ಮೆ ಖಾತೆ ಸಂಖ್ಯೆ ಬದಲಾವಣೆ ಮಾಡಿ ಇಂಡಿಕರಿಸಿ ಅನುಮೋದನೆ ನೀಡಲಾಗಿದೆ ಎಂದು ಪಿಂಚಣಿ ನಿರ್ದೇಶನಾಲಯದಿಂದ ತಿಳಿದು ಬಂದಿದೆ.

ಸಾಮಾಜಿಕ ಭದ್ರತೆ, ಪಿಂಚಣಿ ನಿರ್ದೇಶನಾಲಯ ನೀಡಿರುವ ದಾಖಲಾತಿ ಪ್ರಕಾರ ಫ‌ಲಾನುಭವಿ ನಿರ್ಮಲಾ ಅವರ ಪಿಂಚಣಿ ಹಣ ಬೇರೆಯವರ ಖಾತೆಗೆ ಜಮೆಯಾಗಿ ರುವ ಬಗ್ಗೆ ದಾಖಲೆ ಕಂಡುಬಂದಿವೆ. ಉಲ್ಲೇಖ (3)ರ ಪತ್ರದಲ್ಲಿ ಈ ರೀತಿಯ ಪ್ರಕರಣ ಪುನರಾವರ್ತಿಯಾಗಿರು ವುದರಿಂದ ಸದರಿ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿ ರುವ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪೂರಕ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾ ಲಯ ನೀಡಿದ ಸೂಚನೆ ಮೇರೆಗೆ ಸಾಮಾಜಿಕ ಭದ್ರತಾ ಆಪರೇಟರ್‌ ರಘು ಎಂಬಾತನಿಗೆ ತಾಲೂಕು ಆಡಳಿತ ನೋಟಿಸ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next