Advertisement
ಪಿಂಚಣಿ ಬಾಕಿ ಹಣ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಸಮರ ಸೃಷ್ಟಿಸಿತ್ತು. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಹಣ ನೀಡದೆ ಕಾಂಗ್ರೆಸ್ ಸರಕಾರ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿ ಬಿಜೆಪಿಯವರು, ಮುಖ್ಯಮಂತ್ರಿ, ಸಚಿವರ ವಿರುದ್ಧ ಹಲವು ಸುತ್ತಿನ ಹೋರಾಟ ಕೈಗೊಂಡಿದ್ದರೂ ಇದೀಗ ಅಂತಿಮವಾಗಿ ಬಾಕಿ ಹಣದ ಆಸೆ ಬಿಟ್ಟು ಬಿಡಿ ಎಂಬ ಸಂದೇಶವನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸಾರಿದ್ದಾರೆ.
Related Articles
Advertisement
ಬಾಕಿ ಹಣ ಆಸೆ ಬಿಟ್ಟು ಬಿಡಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಪಿಂಚಣಿ ಬಾಕಿ ಹಣದ ಪ್ರಕರಣಕ್ಕೆ ತೆರೆ ಎಳೆದಿದ್ದು, ಹಿಂದಿನ ಬಾಕಿ ನೀಡಿಕೆ ಅಸಾಧ್ಯ. ಅದರ ಆಸೆ ಬಿಟ್ಟುಬಿಡಿ. ಬೇರೆ ಅಭಿವೃದ್ಧಿ ಯೋಜನೆಗೆ ಪ್ರಸ್ತಾವನೆ ನೀಡಿ ಅನುದಾನ ನೀಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಹಣ ಬರುವ ಆಸೆಗೆ ಇತಿಶ್ರೀ ಹಾಡಿದ್ದಾರೆ.
ಪ್ರಸ್ತುತ ಸ್ಥಿತಿಯಲ್ಲಿ ಸರಕಾರ ಇದ್ದ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದ್ದು, ಹಲವು ಗೊಂದಲಗಳನ್ನು ಸುತ್ತಿಕೊಂಡ ಬಾಕಿ ಹಣದ ಪಾವತಿಗೆ ಖಂಡಿತವಾಗಿಯೂ ಮುಂದಾಗದು. ರೈತರ ಸಾಲ ಮನ್ನಾದ ಹಣ ಹೊಂದಾಣಿಕೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಾಕಿ ಹಣಕ್ಕೆ ಸುತಾರಾಂ ಒಪ್ಪುವುದಿಲ್ಲ ಎಂಬ ವಾಸ್ತವದ ಸಂಗತಿ ಅರಿತಿರುವ ಪಾಲಿಕೆ ಆಡಳಿತ ಮಂಡಳಿಯೂ ಸಹ ಪಿಂಚಣಿ ಬಾಕಿ ಆಸೆಯನ್ನು ಕೈ ಬಿಡಲು ಮುಂದಾಗಿದೆ.
ಸರಿದೂಗಿಸುವ ಸವಾಲುಪಿಂಚಣಿ ಬಾಕಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಲಿಕೆಯವರಿಗೆ ಇದೀಗ ಬಾಕಿ ಹಣ ಬಾರದು ಎಂಬ ವಾಸ್ತವ ಅರಿವಿಗೆ ಬಂದಿದೆ. ಆದರೆ, ಈಗಾಗಲೇ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವಾಗಿ ನೀಡಿದ ಅಂದಾಜು 105 ಕೋಟಿ ರೂ. ಗಳನ್ನು ಸರಿದೂಗಿಸುವುದು ಯಾವ ಬಾಬತ್ತಿನಿಂದ ಎಂಬ ಸವಾಲು ಎದುರಾಗಿದೆ. ಪಾಲಿಕೆ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆಸ್ತಿಕರ ಹೊರತು ಪಡಿಸಿದರೆ ಜಾಹೀರಾತು, ಭೂ ಬಾಡಿಗೆ, ವಾಣಿಜ್ಯ ಮಳಿಗೆಗಳು, ಕಟ್ಟಡ ಪರವಾನಗಿ ಶುಲ್ಕ, ನೀರಿನ ಬಾಕಿ ಹೀಗೆ ವಿವಿಧ ವಿಭಾಗಗಳಲ್ಲಿ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಕೆಲವೊಂದು ಬಾಬತ್ತುಗಳಿಂದ ನಯಾ ಪೈಸೆಯು ಆದಾಯ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದರಿಲಿ, ನೌಕರರಿಗೆ ವೇತನ ನೀಡುವುದಕ್ಕೂ ಸಂಕಷ್ಟ ಪಡುವ ಸ್ಥಿತಿ ಇದೆ. ಅಮರೇಗೌಡ ಗೋನವಾರ