Advertisement

ಪಿಂಚಣಿ ವಂಚಿತ ನೌಕರರಿಂದ ಮನೆಯಲ್ಲೇ ಪ್ರತಿಭಟನೆ

01:18 PM Aug 01, 2020 | Suhan S |

ಕನಕಗಿರಿ: ಎಷ್ಟೇ ಹೋರಾಟ ಮಾಡಿದರೂ ನಮ್ಮ ಅಳಲು ಕೇಳದೆ ಕುಂಟು ನೆಪ ಹಾಗೂ ಸುಳ್ಳು ಭರವಸೆ ನೀಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌನೇಶ್ವರ.ವೈ.ಬಿ. ತಮ್ಮ ನಿವಾಸದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೆಲ ನೌಕರರು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಈಗಾಗಲೇ ಬಿಡಿಗಾಸು ಇಲ್ಲದೇ ನಿವೃತ್ತಿ ಹೊಂದಿರುವ ಹಾಗೂ ಸರ್ಕಾರದ ಯಾವುದೇ ನೆರವಿಲ್ಲದೇ ಬೀದಿಗೆ ಬಿದ್ದು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸೇವೆಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿರುವ ನೌಕರರ ಕುಟುಂಬ ವರ್ಗ ಸೇರಿದಂತೆ ರಾಜ್ಯದ ಸಾವಿರಾರು ಪಿಂಚಣಿ ವಂಚಿತ ನೌಕರರು ಇಡೀ ರಾಜ್ಯಾದ್ಯಂತ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ನಮ್ಮ ಹೋರಾಟ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next