Advertisement

Udupi ಕಂಟೈನರ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

11:44 PM Nov 01, 2023 | Team Udayavani |

ಉಡುಪಿ: ಬುಧವಾರ ಕಂಟೈನರ್‌ ಢಿಕ್ಕಿ ಹೊಡೆದು ಪಾದಚಾರಿ ಪೆರಂಪಳ್ಳಿ ಸ್ವಾಮಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಉಡುಪಿ ಪುತ್ತೂರು ನಿವಾಸಿ ಸಂಜೀವ ಪೂಜಾರಿ (62) ಮೃತಪಟ್ಟಿದ್ದಾರೆ.

Advertisement

ಅವರು ಕರಾವಳಿ – ಸಂತೆಕಟ್ಟೆ ರಾ.ಹೆ. 66ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಂಟೈನರ್‌ ವಾಹನವನ್ನು ಅದರ ಚಾಲಕ ಪ್ರಮೋದ್‌ ಅವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಂಜೀವ ಅವರಿಗೆ ಢಿಕ್ಕಿ ಹೊಡೆದಿದ್ದ.ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೆಂಪು ಕಲ್ಲು ಉದ್ಯಮಿ, ಲಾರಿ ಮಾಲಕ, ಉಪ್ಪೂರು ವ್ಯವಸಾಯಿಕ ಸೇವಾ ಸಹಕಾರ ಸಂಘದ ಮೂರು ಬಾರಿ ನಿರ್ದೇಶಕ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ, ಕಾರ್ತಿಬೈಲು ಬಬ್ಬು ಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ, ಹಾವಂಜೆ ಗ್ರಾಮದ ಕಾರ್ತಿಬೈಲು ಗುರಿಕಾರ ಹಾಗೂ ಹಾವಂಜೆ ಬಿಲ್ಲವ ಸಂಘ, ಮುಗ್ಗೇರಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸಕ್ರಿಯರಾಗಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next