Advertisement

ಹಿಂದುತ್ವದ ಹೈಜಾಕ್‌: ಮುಫ್ತಿ ಆರೋಪ

07:26 PM Nov 13, 2021 | Team Udayavani |

ಶ್ರೀನಗರ: “ಸನಾತನ ಧರ್ಮವೆಂದರೆ ಎಲ್ಲರಲ್ಲಿ ಒಳಗೊಳ್ಳುವುದು. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಂದುತ್ವವನ್ನು ಹೈಜ್ಯಾಕ್‌ ಮಾಡಿ ಕೋಮುವಾದ ಬಿತ್ತುವ ಕೆಲಸ ಮಾಡುತ್ತಿವೆ.’ ಹೀಗೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್‌ ಡೆಮೋಕ್ರಟಿಕ್‌ ಪಾರ್ಟಿ(ಪಿಡಿಪಿ)ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಶನಿವಾರ ಹೇಳಿದ್ದಾರೆ.

Advertisement

“ಸನಾತನ ಧರ್ಮ ಕೋಮುವಾದವನ್ನು ಕಲಿಸುವುದಿಲ್ಲ. ಆದರೆ ಅದನ್ನು ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಜನಸಂಘ ಕಲಿಸುತ್ತದೆ. ಹಿಂದುತ್ವವೆಂದರೆ ತಾವೇ ಎಂದು ಅವರು ಭಾವಿಸಿದ್ದಾರೆ. ಕೋಮುವಾದಿ ಪಕ್ಷವನ್ನು ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌)ಗೆ ಹೋಲಿಸಬಹುದು. ಹಿಂದೂ ಮತ್ತು ಮುಸ್ಲಿಂ ನಡುವೆ ಜಗಳ ಹುಟ್ಟುಹಾಕುವವರನ್ನೂ ಐಸಿಸ್‌ಗೆ ಹೋಲಿಸಬಹುದು’ ಎಂದು ಮುಫ್ತಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next