Advertisement

ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಅತ್ಯಂತ ಆದರತೆಯಿಂದ ಉಪಚರಿಸಬೇಕು : ಸುನೀಲ್ ಕುಮಾರ್

12:09 PM May 08, 2021 | Team Udayavani |

ಕಾರ್ಕಳ : ವೈದ್ಯಕೀಯ ಚಿಕಿತ್ಸೆ ಬಯಸಿ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಅತ್ಯಂತ ಆದರತೆಯಿಂದ ಉಪಚರಿಸಬೇಕು. ಆಸ್ಪತ್ರೆ ಹೊರಗೆ , ವಾಹನಗಳಲ್ಲಿ ಕಾಯುವುದನ್ನು ತಪ್ಪಿಸಲು ಕಾರ್ಕಳ ಸರಕಾರಿ ಆಸ್ಪತ್ರೆ ಮುಂದೆ ಹಾಸಿಗೆಯುಳ್ಳ ಉಪಚರಿಸುವ  ನಾಲ್ಕು ಬೆಡ್ ಗಳ ಆರೈಕೆ ಕೇಂದ್ರ ತೆರೆಯಲಾಗುವುದು ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

Advertisement

ಶನಿವಾರ ತಾಲೂಕು ಆಸ್ಪತ್ರೆಗೆ ತೆರಳಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಿ ಆಸ್ಪತ್ರೆಯ ಕೋವಿಡ್ ನಿರ್ವಹಣೆ ಕುರಿತು  ಪರಿಶೀಲಿಸಿ ಮಾತನಾಡಿದರು.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೆ ಸಮಸ್ಯೆಯಾಗಬಾರದು. ಈ ಕಾರಣಕ್ಕೆ ಬಹುಶ; ರಾಜ್ಯದಲ್ಲೆ ಇಂತಹದ್ದೊಂದು ವ್ಯವಸ್ಥೆ ಅಪರೂಪ. ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿದೆ ಎಂದರು.  ಅನಂತರ ಅವರು ಆಸ್ಪತ್ರೆಯಲ್ಲಿ ತೆರೆಯಲಾಗುವ ಆಕ್ಸಿಜನ್ ಸೆಂಟರ್  ಜಾಗ ಪರಿಶೀಲಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ.ಆಡಳಿತಾಧಿಕಾರಿ ಡಾ.ಕೆ.ಎಸ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next