Advertisement

ಸರ್ಕಾರಿ ಆಸ್ಪತ್ರೆ ಬಗ್ಗೆ ನಿಂಗೇನ್ ಗೊತ್ತು?ವರ್ತೂರ್ ಗೆ ರಮೇಶ್ ಕುಮಾರ

05:03 PM Jul 01, 2017 | Sharanya Alva |

ಕೋಲಾರ: ಡೆಂಗ್ಯು ಬಂದರೆ ನಿಮ್ಮ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸ್ಬೇಡಿ. ರೋಗಿಗಳನ್ನು ನೇರ ಬೆಂಗಳೂರಿಗೆ ಕರೆದುಕೊಂಡು ಹೋಗಿ. ಇಲ್ಲದಿದ್ದರೆ ಮೂರು ದಿನದಲ್ಲಿ ಡೆಡ್ ಬಾಡಿ ತಗೊಂಡು ಹೋಗ್ಬೇಕು ಎಂದು ಶಾಸಕ ವರ್ತೂರು ಪ್ರಕಾಶ್ ಸಭೆಯೊಂದರಲ್ಲಿ ಗಂಭೀರವಾಗಿ ಆರೋಪಿಸಿದ್ದು, ಇದಕ್ಕೆ ಆರೋಗ್ಯ ಸಚಿವ ಕೆಆರ್ ರಮೇಶ್ ಕುಮಾರ್ ಅವರು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಕೋಲಾರದಲ್ಲಿ ನಡೆದಿದೆ.

Advertisement

ಪತ್ರಿಕಾ ದಿನಾಚರಣೆಯ ಭಾಷಣದ ವೇಳೆ ಮಾತನಾಡುತ್ತಿದ್ದ ವರ್ತೂರು ಪ್ರಕಾಶ್ ಸರ್ಕಾರಿ ಆಸ್ಪತ್ರೆ ಬಗ್ಗೆ ದೂರಿದ್ದರು. ಆಗ ವೇದಿಕೆಯಲ್ಲೇ ಇದ್ದ ಸಚಿವ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಆಸ್ಪತ್ರೆ ಬಗ್ಗೆ ನಿಂಗೇನ್ ಗೊತ್ತು? ಸರ್ಕಾರಿ ಆಸ್ಪತ್ರೆ ಸ್ಥಿತಿ ಬಗ್ಗೆ ಗೊತ್ತಾ? ಒಟ್ಟಾರೆ ಬಾಯಿಗೆ ಬಂದಂತೆ ಮಾತನಾಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದ 24ಗಂಟೆಯೂ ಸೇವೆ ಇದೆ. ನಿನ್ನ ಬಳಿ ದುಡ್ಡಿದ್ದರೆ ಯಾವ ಆಸ್ಪತ್ರೆಗೆ ಬೇಕಾದರು ಕರೆದುಕೊಂಡು ಹೋಗಬಹುದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next