Advertisement

ಕೋವಿಡ್ ಸೋಂಕಿಗೆ ಪತಂಜಲಿ ಆಯುರ್ವೇದಿಕ್ ಔಷಧಿ ಬಿಡುಗಡೆ ಮಾಡಿದ ಬಾಬಾ ರಾಮದೇವ್

01:19 PM Jun 23, 2020 | keerthan |

ಹರಿದ್ವಾರ: ದೇಶಾದ್ಯಂತ ಕಾಡುತ್ತಿರುವ ಕೋವಿಡ್-19 ಸೋಂಕಿಗೆ ಪತಂಜಲಿ ಸಂಸ್ಥೆ ಆಯುರ್ವೇದಿಕ್ ಔಷಧಿಯನ್ನು ಬಿಡುಗಡೆ ಮಾಡಿದೆ. ಕೊರೊನಿಲ್ ಎಂಬ ಔಷಧಿಯನ್ನು ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿದ್ದು, ಇದು ಸೋಂಕಿನ ವಿರುದ್ಧ ಶತಪ್ರತಿಶತ ಕೆಲಸ ಮಾಡಲಿದೆ ಎಂದಿದೆ.

Advertisement

ಪತಂಜಲಿ ಸಂಸ್ಥೆಯ ಪ್ರಧಾನ ಕಚೇರಿ ಉತ್ತರಾಖಂಡ್ ನ ಹರಿದ್ವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್, ಕೊರೊನಿಲ್ ಔಷಧಿಯನ್ನು ಬಿಡುಗಡೆ ಮಾಡಿದರು.

ಪತಂಜಲಿ ಸಂಶೋಧನ ಕೇಂದ್ರ ಮತ್ತು ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಂಟಿಯಾಗಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಪತಂಜಲಿಯ ದಿವ್ಯಾ ಫಾರ್ಮಸಿಯಲ್ಲಿ ಈ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಪತಂಜಲಿ ಹೇಳಿಕೊಂಡಿದೆ.

ಕೋವಿಡ್ 19 ಸೋಂಕಿಗೆ ಯಾರಾದರೂ ಔಷಧಿ ಹುಡುಕಲಿ ಎಂದು ಇಡೀ ವಿಶ್ವ ಎದುರು ನೋಡುತ್ತಿದೆ. ಇಂದು ನಾವು ಕೋವಿಡ್ ಸೋಂಕಿಗೆ ವಿಶ್ವದ ಮೊದಲ ಆಯುರ್ವೇದಿಕ್ ಔಷಧಿಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ರಾಮ್ ದೇವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next