Advertisement

ಚುನಾವಣಾ ಪ್ರಚಾರ ಸಭೆಯಲ್ಲಿ ಪಂಜಾಬ್‌ ಸಿಎಂ ಬಾದಲ್‌ ಮೇಲೆ ಶೂ ಎಸೆತ 

03:13 PM Jan 11, 2017 | Team Udayavani |

ಅಮೃತ ಸರ: ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ಲಂಬಿಯಲ್ಲಿ ಬುಧವಾರ ನಡೆದಿದೆ. 

Advertisement

ಸ್ವಕ್ಷೇತ್ರದಲ್ಲಿ ಪ್ರಚಾರ ನಿರತರಾಗಿದ್ದ ವೇಳೆ ವ್ಯಕ್ತಿಯೊಬ್ಬ ಎಸೆದ ಶೂ ಬಾದಲ್‌ ಅವರ ಮೈಗೆ ತಾಗಿದ್ದು, ಕೈಯಲ್ಲಿದ್ದ ಗ್ಲಾಸ್‌ ಒಡೆದು ಹೋಗಿರುವುದಾಗಿ ವರದಿಯಾಗಿದೆ. ಶೂ ಎಸೆದ ವ್ಯಕ್ತಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶೂ ಎಸೆದಾತನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆತನ ಕುರಿತು ವಿವರಗಳು ಇನ್ನಷ್ಟೆ ಲಭ್ಯವಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next