Advertisement

ಉದ್ಯಾನವನ ಅಭಿವೃದ್ದಿಗೆ ಚಾಲನೆ

05:41 PM Apr 04, 2022 | Shwetha M |

ಸಿಂದಗಿ: ಪಟ್ಟಣದಲ್ಲಿನ ಉದ್ಯಾನವನಗಳ ಅಭಿವೃದ್ಧಿಯಿಂದ ವಾರ್ಡ್‌ಗಳ ಸೌಂದರ್ಯ ಹೆಚ್ಚಾಗುವ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಹೇಳಿದರು.

Advertisement

ಪಟ್ಟಣದ ವಾರ್ಡ್‌ ನಂ. 3ರ ಸಂಗಮೇಶ್ವರ ಬಡಾವಣೆಯಲ್ಲಿನ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಿದ ನಂತರ ಸಾರ್ವಜನಿಕರು ಸ್ವತ್ಛತೆ ಕಾಪಾಡಿಕೊಳ್ಳಬೇಕು. ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ವಾರ್ಡ್‌ ನಂ. 3ರಲ್ಲಿನ ಸಂಗಮೇಶ್ವರ ಲೇಔಟ್‌ನಲ್ಲಿನ ಉದ್ಯಾನವನ್ನು ಪುರಸಭೆಯ 2021-22ನೇ ಸಾಲಿನ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ 4ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಮುಖ್ಯಾಧಿಕಾರಿ ಪ್ರಕಾಶ ಮದುಗೋಳಕರ, ವಾರ್ಡ್‌ ಸದಸ್ಯ ಶ್ರೀಶೈಲ ಭೀರಗೊಂಡ, ಅಭಿಯಂತರ ಅಜರುದ್ಧಿನ ನಾಟಿಕಾರ, ಶಿವು ಬಡಿಗೇರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next