Advertisement

ಮಳೆಗಾಗಿ ದೇಗುಲಗಳಲ್ಲಿ ಪರ್ಜನ್ಯ ಜಪ

02:32 AM Jun 07, 2019 | Team Udayavani |

ಶೃಂಗೇರಿ: ರಾಜ್ಯದಲ್ಲಿ ಉತ್ತಮ ಮಳೆ ಸುರಿದು ಸಮೃದ್ಧಿ ನೆಲೆಸಲಿ ಎಂದು ಮಳೆ ದೇವರೆಂದೇ ಕರೆಯಲ್ಪಡುವ ಕಿಗ್ಗಾದ ಶ್ರೀ ಶಾಂತಾ ಸಮೇತ ಶ್ರೀ ಋಷ್ಯ ಶೃಂಗಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಸರ್ಕಾರದ ಪರವಾಗಿ ಪರ್ಜನ್ಯ ಜಪ, ಹೋಮ ಹಾಗೂ ವಿಶೇಷ ಪೂಜೆಗಳು ವಿಧಿವತ್ತಾಗಿ ನೆರವೇರಿದವು.

Advertisement

ಕಿಗ್ಗಾದ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆ 5ಗಂಟೆಯಿಂದಲೇ ಪರ್ಜನ್ಯ ಜಪ ಮತ್ತು ಹೋಮ ಕಾರ್ಯಗಳು ಆರಂಭಗೊಂಡವು. ಪುರೋಹಿತರಾದ ವಿಶ್ವನಾಥ ಭಟ್ಟ ಮತ್ತು ಶಿವರಾಂ ಭಟ್ಟರ ನೇತೃತ್ವದಲ್ಲಿ, 20 ಋತ್ವಿಜರ ತಂಡದಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ಪರಮೇಶ್ವರ ನಾಯ್ಕ ಪಾಲ್ಗೊಂಡಿದ್ದರು.

ಬುಧವಾರ ಸಂಜೆ ಶೃಂಗೇರಿ ಶ್ರೀ ಮಠಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದ ಸಚಿವದ್ವಯರು ಗುರುವಾರ ಬೆಳಗ್ಗೆ ಕಿಗ್ಗಾಕ್ಕೆ ತೆರಳಿ ಪರ್ಜನ್ಯ ಜಪದಲ್ಲಿ ಪಾಲ್ಗೊಂಡರು. ಸಚಿವರ ಸಮ್ಮುಖದಲ್ಲಿ ಸಂಕಲ್ಪ ಕೈಗೊಂಡ ಪುರೋಹಿತರು ನಂತರ ಪರ್ಜನ್ಯ ಜಪ ಹಾಗೂ ಹೋಮ ನೆರವೇರಿಸಿದರು. ಮಳೆ ದೇವರೆಂದೇ ಹೆಸರಾಗಿರುವ ಸ್ವಾಮಿ ಸನ್ನಿಧಿಯಲ್ಲಿ ಮಳೆ ಕಡಿಮೆಯಾದಾಗ ಅಥವಾ ಮಳೆ ಹೆಚ್ಚಾದಾಗ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next