Advertisement

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಈಗಿಂದಲೇ ತಯಾರಿ : ಮುಂದಿನ ಕೂಟಕ್ಕೆ ರಾಜ್ಯದ 75 ಕ್ರೀಡಾಳುಗಳು

01:39 AM Aug 21, 2021 | Team Udayavani |

ಬೆಂಗಳೂರು: ಮುಂದಿನ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನತ್ತ ಗಮನ ನೆಟ್ಟಿರುವ ಸರಕಾರ, ಕ್ರೀಡಾ ಪಟುಗಳನ್ನು ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ಈಗಲೇ ಆರಂಭಿಸಿದೆ. ಅಮೃತ ಕ್ರೀಡಾ ದತ್ತು ಯೋಜನೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಯುವ ಸಶಕ್ತೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಹೇಳಿದ್ದಾರೆ.

Advertisement

“ಖೇಲೋ ಇಂಡಿಯಾ’ ಯೋಜನೆ ಯಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರಕಾರವೂ ಕ್ರೀಡೆಗೆ ಉತ್ತೇಜನ ನೀಡುವುದರ ಜತೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು “ಅಮೃತ ಕ್ರೀಡಾ ದತ್ತು’ ಯೋಜನೆ ಜಾರಿಗೆ ತಂದಿದೆ. ಪದಕ ಗೆಲ್ಲುವ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಸೂಕ್ತ ತರಬೇತಿ ನೀಡುವುದೇ ಇದರ ಉದ್ದೇಶ ಎಂದು ಸಚಿವರು ತಿಳಿಸಿದ್ದಾರೆ.

5 ಲಕ್ಷ ರೂ. ಪ್ರೋತ್ಸಾಹ ಧನ
ತರಬೇತಿಗೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆಕಾಂಕ್ಷಾ ಪೋರ್ಟಲ್‌ ಮೂಲಕ ಸಿಎಸ್‌ಆರ್‌ ನಿಧಿಯನ್ನೂ ಅಮೃತ ಕ್ರೀಡಾ ದತ್ತು ಯೋಜನೆಗಾಗಿ ಬಳಸುವುದಕ್ಕೆ ಅವಕಾಶ ಕಲ್ಪಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಏನೇನು ಕ್ರಮ?
– ವೈಜ್ಞಾನಿಕವಾಗಿ ಕ್ರೀಡಾ ಪ್ರತಿಭಾನ್ವೇಷಣೆ
– ತರಬೇತಿ ಶಿಬಿರಗಳು, ಕ್ರೀಡಾ ಕೂಟ ಗಳ ಮೂಲಕ ಕ್ರೀಡಾ ಸಾಮರ್ಥ್ಯ ಗುರುತಿಸುವಿಕೆ
– ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಯಲ್ಲಿ ನೋಂದಾಯಿಸಿದ, ರಾಜ್ಯದ ಸಂಘ-ಸಂಸ್ಥೆಗಳು ಪೋಷಿ ಸಿರುವ ಸಾಧಕ ಕ್ರೀಡಾ ಪಟು ಗಳ ಪೈಕಿ ಶ್ರೇಷ್ಠರ ಆಯ್ಕೆ
– ಉನ್ನತ ಅಧಿಕಾರ ಸಮಿತಿ ರಚಿಸಿ ಕ್ರೀಡಾ ಪ್ರತಿಭೆಗಳ ಪಟ್ಟಿ ಪರಿಶೀಲನೆ

ಸಮಿತಿಯ ಸದಸ್ಯರು
ಕ್ರೀಡಾ ಸಚಿವರು ಸಮಿತಿಯ ಅಧ್ಯಕ್ಷರು. ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷರು ಉಪಾಧ್ಯಕ್ಷರು. ಸರಕಾರದ ಅಪರ ಮುಖ್ಯ ಕಾರ್ಯ ದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸದಸ್ಯರು. ಆಯುಕ್ತರು, ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು. ಕ್ರೀಡಾ ವಿಜ್ಞಾನ ಕೇಂದ್ರದ ತಜ್ಞರು, ಹಾಕಿ ಆಟಗಾರ ವಿ.ಆರ್‌. ರಘುನಾಥ್‌, ಈಜು ಪಟು ನಿಹಾರ್‌ ಅಮೀನ್‌, ಬ್ಯಾಡ್ಮಿಂಟನ್‌ ಆಟಗಾರ ಅನೂಪ್‌ ಶ್ರೀಧರ್‌ ಕೂಡ ಸದಸ್ಯರಾಗಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next