Advertisement

ಶವ ಬಿಡುಗಡೆಗೆ ಲಂಚ ಕೇಳಿದ ಆಸ್ಪತ್ರೆ ಸಿಬ್ಬಂದಿ: ಭಿಕ್ಷಾಟನೆ ಮಾಡಿದ ಪೋಷಕರು

12:53 PM Jun 09, 2022 | Team Udayavani |

ಸಮಸ್ತಿಪುರ್: ಬಿಹಾರದಲ್ಲಿ ನಡೆದ ಮನಕಲುಕುವ ಘಟನೆಯೊಂದರಲ್ಲಿ ಮೃತದೇಹವನ್ನು ಬಿಡುಗಡೆ ಮಾಡಲು 50 ಸಾವಿರ ರೂ. ಲಂಚವನ್ನು ಕೇಳಿದ್ದಾರೆಂದು ಆರೋಪಿಸಿ ತಮ್ಮ ಮಗನ ಶವವನ್ನು ಬಿಡುಗಡೆ ಮಾಡುವ ಸಲುವಾಗಿ ಯುವಕನ ಪೋಷಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸಲು ಮುಂದಾದ ಬಗ್ಗೆ ವರದಿಯಾಗಿದೆ.

Advertisement

ಕೆಲ ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ. ಈಗ, ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ. ನನ್ನ ಮಗನ ಶವವನ್ನು ಬಿಡಿಸಲು ಆಸ್ಪತ್ರೆಯ ಉದ್ಯೋಗಿ 50 ಸಾವಿರ ರೂ. ಕೇಳಿದ್ದಾರೆ. ನಾವು ಬಡವರು, ಈ ಮೊತ್ತವನ್ನು ಹೇಗೆ ಪಾವತಿಸುವುದು ಎಂದು ಮೃತ ಯುವಕನ ತಂದೆ ಮಹೇಶ್ ಠಾಕೂರ್ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.

ನಾವು ಖಂಡಿತವಾಗಿಯೂ ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ಹೊಣೆಗಾರರನ್ನು ಬಿಡುವುದಿಲ್ಲ ಎಂದು ಸಮಸ್ತಿಪುರದ ಸಿವಿಲ್ ಸರ್ಜನ್ ಡಾ ಎಸ್‌ಕೆ ಚೌಧರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಾನು ನಡೆಸಿದ ಪ್ರಾಥಮಿಕ ತನಿಖೆಯು ದಂಪತಿಗಳ ಆರೋಪಗಳು ಸುಳ್ಳು ಎಂದು ತಿಳಿದುಬಂದಿದೆ. ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಎಂ ವಿನಯ್ ಕುಮಾರ್ ರಾಯ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next