Advertisement

ಬಿಎಸ್‌ವೈಗೆ ಪರ್ರಿಕರ್‌ ಬರೆದದ್ದು ಲವ್‌ ಲೆಟರ್‌: ಆಂಜನೇಯ

07:25 AM Dec 30, 2017 | Team Udayavani |

ಬಸವನಬಾಗೇವಾಡಿ: ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರು ಮಹದಾಯಿ ನದಿ ನೀರಿನ
ವಿಷಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಬೇಕಾಗಿತ್ತು. ಅದನ್ನು ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದಿದ್ದಾರೆ. ಅದು ಮಹದಾಯಿ ನದಿ ನೀರಿನ ವಿಷಯದ ಪತ್ರವಲ್ಲ.

Advertisement

ಅವರಿಬ್ಬರ ನಡುವಿನ ಲವ್‌ ಲೆಟರ್‌ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಲೇವಡಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹದಾಯಿ ನದಿ ನೀರಿನ ವಿಷಯ ಮೂರು ರಾಜ್ಯಗಳಿಗೆ ಸಂಬಂಧಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಎಷ್ಟು ನೀರು
ಬಳಸಬೇಕೆಂಬ ಬಗ್ಗೆ ಚರ್ಚಿಸಬೇಕು. ಮೂರೂ ರಾಜ್ಯದ ಮುಖ್ಯಮಂತ್ರಿಗಳನ್ನು ಪ್ರಧಾನಿ ವಿಶ್ವಾಸಕ್ಕೆ ತೆಗೆದುಕೊಂಡು
ಸಮಸ್ಯೆ ಬಗೆಹರಿಸದ ಹೊರತು ಬೇರೆ ದಾರಿಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next