Advertisement

ಕೈದಿಯ ತಂದೆ ಸಾವಿನ ಸುದ್ದಿ ತಿಳಿಸಲು ಪರದಾಟ: ಮಾಧ್ಯಮಗಳ ನೆರವು 

02:13 PM Jul 16, 2017 | Team Udayavani |

ಬೆಂಗಳೂರು: ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಮಾತಿನಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ಭಾರೀ ಭದ್ರತೆ ಮತ್ತು ಕಟ್ಟೆಚ್ಚರ ವಹಿಸಲಾಗಿದೆ. ಇದರಿಂದಾಗಿ ಕೈದಿಯೊಬ್ಬನಿಗೆ ತಂದೆಯ ಸಾವಿನ ವಿಚಾರ ತಿಳಿಸಲು ಪರದಾಡಬೇಕಾದ ಪ್ರಸಂಗ ಭಾನುವಾರ ನಡೆದಿದೆ. 

Advertisement

ತುಮಕೂರು ಮೂಲದ ರಾಜಣ್ಣ ಎಂಬ ಕೈದಿಯ ತಂದೆ ಇಂದು ನಸುಕಿನ ವೇಳೆ ಸಾವನ್ನಪ್ಪಿದ್ದು, ವಿಷಯವನ್ನುತಿಳಿಸಲು ರಾಜಣ್ಣ ಪತ್ನಿ ಅರುಣಾ ಮತ್ತು ನಾದಿನಿ ಜೈಲಿಗೆ ತೆರಳಿದ್ದರು. ಆದರೆ ಜೈಲಿನ ಭದ್ರತಾ ಸಿಬಂದಿಗಳು ಯಾವುದೇ ಕಾರಣಕ್ಕೂ ಭೇಟಿ ಸಾಧ್ಯವಿಲ್ಲ ನಾಳೆ ಬನ್ನಿ ಎಂದಿದ್ದಾರೆ. ಎಷ್ಟೇ ಗೊಗೆರೆದರೂ ಭದ್ರತೆಯ ಕಾರಣ ನೀಡಿ  ಅವಕಾಶ ನೀಡಲು ನಿರಾಕರಿಸಿದ್ದಾರೆ. 

ಈ ವಿಚಾರವನ್ನು ಜೈಲಿನ ಬಳಿಯಿದ್ದ ಸುದ್ದಿ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದು ಬಳಿಕ 12 ಗಂಟೆಯ ನಂತರ ಭೇಟಿಗೆ ಅವಕಾಶ ನೀಡಿದ್ದಾರೆ ಆದರೆ ಅಂತಿಮ ಕ್ರಿಯೆಗೆ ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next