Advertisement

ದಿವಿತ್‌ ರೈ ಜಪಾನ್‌ ಪ್ರವಾಸಕ್ಕೆ ಪರಮೇಶ್ವರ್‌ ನೆರವು

06:55 AM Mar 18, 2018 | |

ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಾರಾಡಿ ಶಾಲೆಯ ಶಿಕ್ಷಕಿಯರ ವರ್ಗಾವಣೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರಿಗೆ ಪತ್ರ ಬರೆದು, ವರ್ಗಾವಣೆಗೆ ಬ್ರೇಕ್‌ ಬೀಳುವಂತೆ ಮಾಡಿದ್ದ ಬಿ. ದ್ವಿವಿತ್‌ ರೈ ಜಪಾನನಲ್ಲಿ ನಡೆಯುವ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಜಂಬೂರಿಗೆ ಆಯ್ಕೆಯಾಗಿದ್ದಾರೆ.

Advertisement

ಬಿ. ದ್ವಿವಿತ್‌ ರೈ ಜಪಾನ್‌ ಪ್ರವಾಸದ ಸಂಪೂರ್ಣ ವೆಚ್ಚವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ವಹಿಸಿಕೊಂಡಿದ್ದಾರೆ.
ಗೃಹ ಸಚಿವರಾಗಿದ್ದಾಗ ಪತ್ರ ಬರೆದಿದ್ದ ದ್ವಿವಿತ್‌ ರೈಗೆ ನೇರವಾಗಿ ಕರೆ ಮಾಡಿ ಮಾತನಾಡಿದ್ದ ಪರಮೇಶ್ವರ್‌, ನಂತರ ಹಾರಾಡಿ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ತಮ್ಮ ಶಾಸಕರ ನಿಧಿಯಿಂದ 10 ಲಕ್ಷ ರೂ. ಬಿಡುಗಡೆ ಮಾಡುವ ಭರವಸೆ ನೀಡಿ, ದ್ವಿವಿತ್‌ ವಿದ್ಯಾಭ್ಯಾಸದ ವೆಚ್ಚ ಭರಿಸಲು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ಶಾಲೆಗೆ ಹತ್ತು ಲಕ್ಷ ಹಣ ಬಿಡುಗಡೆ ಮಾಡಿ, ಪ್ರತಿ ವಾರ ದ್ವಿವಿತ್‌ ಜೊತೆಗೆ ದೂರವಾಣಿ ಮೂಲಕ ಮಾತನಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next