Advertisement

ಪರಂ ಮೊದಲ ದಲಿತ ಸಿಎಂ ಆಗಬೇಕಿದೆ

12:30 AM Feb 25, 2019 | |

ದಾವಣಗೆರೆ: “ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಅವರು ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಆಗಬೇಕು’ ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಹೇಳಿದರು.

Advertisement

ಶ್ರೀ ಶಿವಯೋಗಿ ಮಂದಿರದಲ್ಲಿ ಅಭಿನಂದನಾ ಹಾಗೂ ಜನ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಮತ್ತೋರ್ವ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಹ ಮುಖ್ಯಮಂತ್ರಿಯಾಗುವುದು ತಪ್ಪಿತು. ಇನ್ನು ಡಾ| ಪರಮೇಶ್ವರ್‌ ಹೇಳಿಕೊಂಡಂತೆ ಮೂರು ಬಾರಿ ಅವರು ಮುಖ್ಯಮಂತ್ರಿ ಆಗುವುದು ತಪ್ಪಿದೆ. ಮುಂದೆ ಅವರು ಪ್ರಯತ್ನ ಮಾಡುವ ಮೂಲಕ ರಾಜ್ಯದ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿ ಆಗಬೇಕೆಂದು ಆಶಿಸಿದರು.

ಛಲವಾದಿ ಸಮಾಜದ ಹೆಮ್ಮೆಯ ಪ್ರತೀಕ ಚಿತ್ರದುರ್ಗದ ಒನಕೆ ಓಬವ್ವನ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು. ರಾಜ್ಯದ ಎಲ್ಲಾ ಕಡೆ ಒನಕೆ ಓಬವ್ವನ ಪುತ್ಥಳಿ ಅನಾವರಣ ಮಾಡಬೇಕೆಂದು ಒತ್ತಾಯಿಸಿದರು

Advertisement

Udayavani is now on Telegram. Click here to join our channel and stay updated with the latest news.

Next