Advertisement

ಓಲೇಕಾರಗೆ ಆನೆ ಮೇಲೆ ಮೆರವಣಿಗೆ

11:22 PM Oct 18, 2019 | Team Udayavani |

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಕೆರೆ ತುಂಬಿಸಲು ಶ್ರಮಿಸಿದ ಶಾಸಕ ನೆಹರು ಓಲೇಕಾರ ಅವರನ್ನು ಗ್ರಾಮ ಸ್ಥರು ಶುಕ್ರವಾರ ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ. ಹಲವು ವರ್ಷಗಳಿಂದ ಕನವಳ್ಳಿ ಗ್ರಾಮದ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು. ಶಾಸಕರಾಗಿ ಆಯ್ಕೆಯಾದ ನೆಹರು ಓಲೇಕಾರ, ಮುತುವರ್ಜಿ ವಹಿಸಿ ನೀರು ತುಂಬಿಸಲು ಶ್ರಮಿಸಿದ್ದರು.

Advertisement

ಶಾಸಕರ ಈ ಕಾರ್ಯ ಮೆಚ್ಚಿ ಗ್ರಾಮಸ್ಥರು ಆನೆ ತರಿಸಿ, ಅದರ ಮೇಲೆ ಶಾಸಕರನ್ನು ಕೂಡಿಸಿ, ವಿವಿಧ ವಾದ್ಯ ತಂಡಗಳೊಂದಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಿ, ಆರತಿ ಎತ್ತಿ ಕೃತಜ್ಞತೆ ಸಲ್ಲಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಶಾಸಕ ನೆಹರು ಓಲೇಕಾರ, “ನೀವೇ ಕೊಟ್ಟ ಅಧಿ ಕಾರವನ್ನು ಉಪಯೋಗಿಸಿಕೊಂಡು ನಿಮ್ಮ ಸೇವೆ ಮಾಡಿದ್ದೇನೆ. ಕನವಳ್ಳಿ ಗ್ರಾಮದ ಬಹು ವರ್ಷದ ಬೇಡಿಕೆಯನ್ನು ಕೇವಲ ಮೂರು ತಿಂಗಳಲ್ಲಿ ಈಡೇರಿಸಿದ್ದಕ್ಕಾಗಿ ಗ್ರಾಮಸ್ಥರು ಆನೆ ಮೆರವಣಿಗೆ ಮಾಡಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next