Advertisement

ಪನ್ವೇಲ್‌ ಕಾಳಿಕಾಂಬಾ ಸೇವಾ ಸಂಘ: ವಿಶ್ವಕರ್ಮ ಮಹೋತ್ಸವ

02:42 PM Sep 27, 2017 | |

ನವಿಮುಂಬಯಿ: ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೇಲ್‌ ಇದರ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವವು ಇತ್ತೀಚೆಗೆ ಪನ್ವೇಲ್‌ ಸಮೀಪದ ದೇರಾವಳಿ ಗ್ರಾಮದ ಪ್ಲಾಟ್‌ ನಂಬರ್‌ 14ರಲ್ಲಿ ಸಂಘದ ನಿರ್ಮಾಣ ಹಂತದಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಮಂಗಳೂರಿನ ನಾರಾಯಣ ಪುರೋಹಿತ್‌ ಮತ್ತು ನಾಗೇಶ್‌ ಪುರೋಹಿತ್‌ ಅವರು ವಿಶ್ವಕರ್ಮ ಹೋಮ ಮತ್ತು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಂಘದ ಆಡಳಿತ ಮಂಡಳಿಯ ಸದಸ್ಯ ಮತ್ತು ಹೊಟೇಲ್‌ ಉದ್ಯಮಿ ದಾಮೋದರ ಆಚಾರ್ಯ ನೆರೂಲ್‌ ಪೂಜಾ ವಿಧಿ-ವಿಧಾನಗಳ ಯಜಮಾನತ್ವ ವಹಿಸಿದ್ದರು. ಧಾರ್ಮಿಕ ವಿಧಿಯ ಅಂಗವಾಗಿ ಬೆಳಗ್ಗೆ 7ರಿಂದ ವಿಶ್ವಕರ್ಮ ಹೋಮ ಮತ್ತು ಪೂಜೆ ನಡೆಯಿತು. ಪೂರ್ವಾಹ್ನ 10 ರಿಂದ ಸಂಘದ ಭಜನ ಮಂಡಳಿಯ ಕಾರ್ಯಾಧ್ಯಕ್ಷ ಬಿ. ಎಂ. ಶ್ರೀನಿವಾಸ ಆಚಾರ್ಯ ಬಿಂಗಾರಿ ಮತ್ತು ರವಿಶಂಕರ ಆಚಾರ್ಯ ನೆರೂಲ್‌ ಅವರ ನೇತೃತ್ವದಲ್ಲಿ ಭಜನ ಕಾರ್ಯಕ್ರಮ ನಡೆಯಿತು.

ಅನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಣ್ಣಪ್ಪ ಆಚಾರ್ಯ ಅವರು ಮಾತನಾಡಿ, ಮುಂದಿನ ವರ್ಷದ ಫೆಬ್ರವರಿಯಲ್ಲಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಸುಮಾರು ನಾಲ್ಕೈದು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಸಮಾರಂಭದಲ್ಲಿ ಸರ್ವ ಸಮಾಜ ಬಾಂಧವರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಸಹಕರಿಸಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಛದ್ಮವೇಷ ಪ್ರದರ್ಶನ ಪ್ರಸ್ತುತಪಡಿಸಿದ ಸಮಾಜದ ಮಕ್ಕಳಿಗೆ ಕಣ್ಣಪ್ಪ ಆಚಾರ್ಯ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನ್ನಪೂರ್ಣಾ ಶ್ರೀಧರ ಆಚಾರ್ಯ ಅವರು ಬಹುಮಾನ ವಿತರಿಸಿ ಅಭಿನಂದಿಸಿದರು. ಸಂಘದ ಉಪಾಧ್ಯಕ್ಷ ಬಿ. ನರಸಿಂಹ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ನಿಟ್ಟೆ ಪದ್ಮನಾಭ ಆಚಾರ್ಯ, ಜತೆ ಕಾರ್ಯದರ್ಶಿ ಸತೀಶ್‌ ವಿ. ಆಚಾರ್ಯ, ಸದಸ್ಯರಾದ ರವಿ ವಿ. ಆಚಾರ್ಯ, ಉಮೇಶ್‌ ಆಚಾರ್ಯ, ಪ್ರಭಾಕರ ಆಚಾರ್ಯ ಸಿಬಿಡಿ, ಚಂದ್ರಶೇಖರ ಆಚಾರ್ಯ, ಆನಂದ ಆಚಾರ್ಯ ಪನ್ವೆಲ್‌, ಮಹಿಳಾ ವಿಭಾಗದ ಉಪಾಧ್ಯಕ್ಷೆಯರಾದ ಶಶಿ ರೇಖಾ ಆಚಾರ್ಯ, ವಿಮಲಾ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಆಚಾರ್ಯ, ಗೌರವ ಕೋಶಾಧಿಕಾರಿ ಚೇತನಾ ಎಸ್‌. ಆಚಾರ್ಯ, ಜತೆ ಕಾರ್ಯದರ್ಶಿ ಪೂರ್ಣಿಮಾ ಸುರೇಶ್‌ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ದಾಮೋದರ ಪುರೋಹಿತ್‌ ಮಂಗಳೂರು, ದಾಮೋದರ ಆಚಾರ್ಯ ಸಾಕಿನಾಕಾ, ಕಾಂಚನಾ ಆಚಾರ್ಯ ಖೋಪರ್‌ಖೈರಣೆ ಅವರಿಗೆ ಒಂದು ನಿಮಿಷಯದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

Advertisement

ಜ್ಯೋತಿ ಎಂ. ಆಚಾರ್ಯ ಮತ್ತು ಶಶಿರೇಖಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಟ್ಟಡ ಸಮಿತಿಯ ಸಂಚಾಲಕ ಶೈಲೇಶ್‌ ಕುಮಾರ್‌ ವಿ. ಆಚಾರ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ದಾಮೋದರ ಆಚಾರ್ಯ ನೆರೂಲ್‌ ಅವರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next