Advertisement

ಉಪಾಧ್ಯಾಯರು ಏಕಾತ್ಮ ಮಾನವತೆಯ ಹರಿಕಾರ: ಅಶ್ವತ್ಥನಾರಾಯಣ್

09:44 PM Sep 25, 2021 | Team Udayavani |

ಬೆಂಗಳೂರು: ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರು ಏಕಾತ್ಮ ಮಾನವತೆಯ ಹರಿಕಾರರಾಗಿದ್ದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಅಶ್ವತ್ಥ ನಾರಾಯಣ್ ಅವರು ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ’ದಲ್ಲಿ ಇಂದು ಶ್ರೀ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಅವರ ಜೀವನಚರಿತ್ರೆ ಕುರಿತು ಮಾತನಾಡಿದ ಅಶ್ವತ್ಥನಾರಾಯಣ್ ಅವರು, ಪ್ರಖರ ರಾಷ್ಟ್ರವಾದಿಯಾಗಿದ್ದ ಉಪಾಧ್ಯಾಯ ಅವರ ಜೀವನ ಮತ್ತು ಚಿಂತನೆಗಳಿಂದ ಬಿಜೆಪಿ ದೇಶದೆಲ್ಲೆಡೆ ಇಂದು ಬೆಳೆದುನಿಂತಿದೆ. ದೇಶದ ಅಭ್ಯುದಯ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ಅವರ ಚಿಂತನೆಗಳನ್ನು ಬಿಜೆಪಿ ಸಾಕಾರಗೊಳಿಸುತ್ತಿದೆ ಎಂದು ನುಡಿದರು.

ದೀನ್‍ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರರಾದ ಡಾ|| ಗಿರಿಧರ್ ಉಪಾಧ್ಯಾಯ, ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next