Advertisement

ಪಾಂಡೆ ಸೆಂಚುರಿ; ಕರ್ನಾಟಕ ಗೆಲುವಿನ ಹ್ಯಾಟ್ರಿಕ್‌

12:27 AM Feb 25, 2019 | Team Udayavani |

ಕಟಕ್‌: ನಿರೀಕ್ಷೆಯಂತೆ ದುರ್ಬಲ ಅರುಣಾಚಲ ಪ್ರದೇಶ ವಿರುದ್ಧ ಭಾರೀ ಅಂತರದ ಜಯ ಸಾಧಿಸಿದ ಕರ್ನಾಟಕ, “ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಸರಣಿ’ಯಲ್ಲಿ ಹ್ಯಾಟ್ರಿಕ್‌ ಪರಾಕ್ರಮದೊಂದಿಗೆ ಮುನ್ನುಗ್ಗಿದೆ. ರವಿವಾರ ಕಟಕ್‌ನಲ್ಲಿ ನಡೆದ “ಡಿ’ ವಿಭಾಗದ ಈ ಮುಖಾಮುಖೀಯಲ್ಲಿ ರಾಜ್ಯ ತಂಡ 146 ರನ್ನುಗಳ ಜಯಭೇರಿ ಮೊಳಗಿಸಿತು.

Advertisement

ನಾಯಕ ಮನೀಷ್‌ ಪಾಂಡೆ ಅವರ ಬಿರುಸಿನ ಶತಕ ಕರ್ನಾಟಕ ಸರದಿಯ ಆಕರ್ಷಣೆಯಾಗಿತ್ತು. ಪಾಂಡೆ ಕೇವಲ 46 ಎಸೆತಗಳಲ್ಲಿ 111 ರನ್‌ ರಾಶಿ ಹಾಕಿದರು. ಈ ಬಿರುಸಿನ ಬ್ಯಾಟಿಂಗ್‌ ವೇಳೆ 7 ಸಿಕ್ಸರ್‌ ಮತ್ತು 9 ಬೌಂಡರಿ ಸಿಡಿಯಿತು. ಪಾಂಡೆ ಅವರ ಈ ಅಮೋಘ ಬ್ಯಾಟಿಂಗ್‌ ಪರಾಕ್ರಮದಿಂದ ಕರ್ನಾಟಕ 4 ವಿಕೆಟಿಗೆ 226 ರನ್‌ ಪೇರಿಸಿತು. ಜವಾಬಿತ್ತ ಅರುಣಾಚಲ ಪ್ರದೇಶ 14.4 ಓವರ್‌ಗಳಲ್ಲಿ 80 ರನ್ನಿಗೆ ಆಲೌಟ್‌ ಆಯಿತು. 

ಆರಂಭಕಾರ ಸಮರ್ಥ್ ಸೇಥ್‌ (49) ಹೊರತುಪಡಿಸಿ ಅರುಣಾಚಲದ ಯಾವ ಆಟಗಾರನೂ ಎರಡಂಕೆಯ ಗಡಿ ತಲುಪಲಿಲ್ಲ. ಕರ್ನಾಟಕ ಪರ ಶ್ರೇಯಸ್‌ ಗೋಪಾಲ್‌ 11 ರನ್ನಿಗೆ 5 ವಿಕೆಟ್‌ ಉರುಳಿಸಿ ಮಿಂಚಿದರು.

ಕರ್ನಾಟಕ ಸರದಿಯ ಉಳಿದ ಪ್ರಮುಖ ಸ್ಕೋರರ್‌ಗಳೆಂದರೆ ರೋಹನ್‌ ಕದಮ್‌ (25) ಮತ್ತು ಬಿ.ಆರ್‌. ಶರತ್‌ (45). ಪಾಂಡೆ-ಶರತ್‌ 4ನೇ ವಿಕೆಟಿಗೆ 11.4 ಓವರ್‌ಗಳಿಂದ 115 ರನ್‌ ಸೂರೆಗೈದರು. ಮಾಯಾಂಕ್‌ ಅಗರ್ವಾಲ್‌ ಆಡಲಿಳಿದಿದ್ದರಿಂದ ಶರತ್‌ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದರು. ಅಗರ್ವಾಲ್‌ ಗಳಿಕೆ 15 ರನ್‌. ಕರುಣ್‌ ನಾಯರ್‌ 11 ರನ್‌ ಮಾಡಿದರು.

ಸೋಮವಾರ ಕರ್ನಾಟಕ-ಮಿಜೋರಾಂ ಮುಖಾ ಮುಖೀಯಾಗಲಿವೆ. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-4 ವಿಕೆಟಿಗೆ 226 (ಪಾಂಡೆ 111, ಶರತ್‌ 43, ಕದಮ್‌ 25, ಸಹಾನಿ 39ಕ್ಕೆ 2). ಅರುಣಾಚಲ ಪ್ರದೇಶ-14.4 ಓವರ್‌ಗಳಲ್ಲಿ 80 (ಸಮರ್ಥ್ ಸೇಥ್‌ 49. ಶ್ರೇಯಸ್‌ ಗೋಪಾಲ್‌ 11ಕ್ಕೆ 5, ಕೌಶಿಕ್‌ 13ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next