Advertisement

Pandavapur: ಹೋರಾಡಿ ಬಸ್‌ ನಿಲುಗಡೆ ಸೇವೆ ಪಡೆದ ವಿದ್ಯಾರ್ಥಿಗಳು

04:38 PM Nov 11, 2023 | Team Udayavani |

ಪಾಂಡವಪುರ: ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೆ ಆಗ್ರಹಿಸಿ ತಾಲೂಕಿನ ಕೆ.ಹೊಸೂರು ಗೇಟ್‌ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕೆ.ಹೊಸೂರು ಗೇಟ್‌ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಹೊಸೂರು ಗೇಟ್‌ ಬಳಿ ಪಾಂಡವಪುರ-ನಾಗಮಂಗಲ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪಾಂಡವಪುರ-ನಾಗಮಂಗಲ, ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ಗಳು ಕೆ.ಹೊಸೂರು ಗೇಟ್‌ ಬಳಿ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನಾನೂಕೂಲ ಉಂಟಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕಳೆದ ಆರು ತಿಂಗಳಿಂದಲೂ ಸಹ ನಮಗೆ ಇದೇ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಬಸ್‌ ನಿಲುಗಡೆಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೂ ಸಹ ಕೆಎಸ್‌ಆರ್‌ಟಿಸಿ ಅಧಿ ಕಾರಿಗಳು ಕೆ.ಹೊಸೂರು ಗೇಟ್‌ ಬಳಿ ಬಸ್‌ ನಿಲ್ಲಿಸುವ ವ್ಯವಸ್ಥೆ  ಮಾಡಿಲ್ಲ ಎಂದು ಕಿಡಿಕಾರಿದರು.

ನಾಗಮಂಗಲ ಕಡೆಗೆ ಹೋಗುವ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲ್ಲಿಸುವುದು ಬೇಡ, ಸ್ಥಳೀಯವಾಗಿ ಓಡಾಡುವ ಬಸ್‌ ಗಳು ನಿಲುಗಡೆ ನೀಡಿದರೆ ಸಾಕು. ಆದರೆ, ಈ ರಸ್ತೆಯಲ್ಲಿ ಸ್ಥಳೀಯವಾಗಿ ಓಡಾಡುವ ಬಸ್‌ ಗಳು ಸಹ ಕೆ.ಹೊಸೂರು ಗೇಟ್‌ ನಲ್ಲಿ ನಿಲ್ಲಿಸುವುದಿಲ್ಲ. ಪಾಂಡವಪುರದಿಂದ ಬರುವಾಗಲೂ ಸಹ ಬಸ್‌ ಗಳು ನಮ್ಮೂರು ಗೇಟ್‌ ಬಳಿ ನಿಲ್ಲಿಸುವುದಿಲ್ಲ. ನಿರ್ವಾಹಕರು ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

Advertisement

ಅಧಿಕಾರಿಗೆ ತರಾಟೆ: ಘಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಅಪ್ಪಿರೆಡ್ಡಿ ಅವರನ್ನು ಸಹ ತರಾಟೆಗೆ ತೆಗೆದುಕೊಂಡು. ಸ್ಥಳೀಯವಾಗಿ ಓಡಾಡುವ ಬಸ್‌ ಗಳು ಕೆ.ಹೊಸೂರು ಗೇಟ್‌ ಬಳಿ ಸ್ಥಗಿತಗೊಳಿಸುವಂತೆ ಕ್ರಮಕೈಗೊಳ್ಳದಿದ್ದರೆ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಒಂದು ದಿನ ನಮ್ಮ ಶಾಲೆಗಳು ವ್ಯರ್ಥವಾದರೂ ಪರವಾಗಿಲ್ಲ,. ಹೋರಾಟ ಮುಂದುವರಿಸುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು.

ಪುಟ್ಟರಾಜು ಕರೆ: ಸಾರಿಗೆ ವ್ಯವಸ್ಥಾಪಕ ಅಪ್ಪಿರೆಡ್ಡಿ ಗೆ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ದೂರವಾಣಿ ಕರೆಮಾಡಿ ವಿದ್ಯಾರ್ಥಿಗಳಿಗೆ ಸಮಸ್ಯೆ  ಯಾಗದಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಭರವಸೆ: ಬಳಿಕ ಸ್ಥಳೀಯವಾಗಿ ಓಡಾಡುವ ಬಸ್‌ ಎಲ್ಲಾ ಬಸ್‌ ಗಳನ್ನು ಕೆ.ಹೊಸೂರು ಗೇಟ್‌ ಬಳಿ ನಿಲ್ಲಿಸಲು ಹಾಗೂ ಒಂದು ಬಸ್‌ ಕೆ.ಹೊಸೂರು ಗ್ರಾಮದ ಮೇಲೆ ಓಡಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ವಾಪಸ್‌ ಪಡೆದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಶ್ರುತಿ, ಸುಚಿತ್ರ, ಭಾವನ ಸೇರಿದಂತೆ ಹಲವರು ಹಾಜರಿದ್ದರು.

2 ಕಿ.ಮೀ. ದೂರ ನಿಲ್ಲಿಸಿದರೆ ನಡೆದುಕೊಂಡು ಬರಬೇಕು:
ಕೆಲವು ಬಸ್‌ ಡ್ರೈವರ್‌ಗಳು ನಮ್ಮೂರು ಗೇಟ್‌ ಬಿಟ್ಟು ಎರಡು ಕಿ.ಮೀ. ದೂರುದ ಟಿ.ಎಸ್‌.ಛತ್ರ ಗ್ರಾಮದಲ್ಲಿ ನಿಲ್ಲಿಸಿದ್ದಾರೆ. ಸಂಜೆಯ ವೇಳೆಯಲ್ಲಿ ಹೆಣ್ಣುಮಕ್ಕಳು ಎರಡು ಕಿ.ಮೀ. ದೂರದಿಂದ ನಡೆದುಕೊಂಡು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಕೆಲ ಕಂಡಕ್ಟರ್‌ಗಳು ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next