Advertisement

ಪಂಚಮಹಾವೈಭವ 2ನೇ ದಿನ

01:00 AM Feb 13, 2019 | Team Udayavani |

ಬೆಳ್ತಂಗಡಿ: ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆಯೋಜನೆ ಗೊಂಡಿರುವ ಪಂಚಮಹಾವೈಭವದ 2ನೇ ದಿನವಾದ ಮಂಗಳವಾರ ಬೆಳಗ್ಗೆ ಅಯೋಧ್ಯೆಯ ಅಧಿಪತಿ ವೃಷಭದೇವ ತನ್ನ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸುವ ದೃಶ್ಯ ಪ್ರದರ್ಶನಗೊಂಡಿತು.

Advertisement

ಅರಸ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂಬ ಹಿನ್ನೆಲೆಯಲ್ಲಿ ತನ್ನ ಪುತ್ರಿಯರಾದ ಬ್ರಾಹ್ಮಿà ಹಾಗೂ ಸುಂದರಿ, ಪುತ್ರರಾದ ಭರತ ಹಾಗೂ ಬಾಹುಬಲಿ ಸಹಿತ ಎಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾನೆ. ಮೊದಲಿಗೆ ಬ್ರಾಹ್ಮಿàಗೆ ಅಕ್ಷರಾಭ್ಯಾಸ ಆರಂಭವಾಗುತ್ತದೆ. ಮುಂದೆ ನಿನ್ನ ಹೆಸರಿನಲ್ಲೇ ಲಿಪಿಯೊಂದು ಪ್ರಸಿದ್ಧಿ ಪಡೆಯಲಿ ಎಂದು ಹರಸುತ್ತಾನೆ. 

ಪುತ್ರ ಭರತನಿಗೆ ಅರ್ಥಶಾಸ್ತ್ರ, ಸಂಪಾದನೆಯನ್ನು ಕಲಿಸಿಕೊಡುತ್ತಾನೆ. ಬಾಹುಬಲಿಗೆ ಯುದ್ಧ ಕಲೆ ಬೋಧಿಸಿ, ರಾಜ್ಯ ರಕ್ಷಿಸುವ ಹೊಣೆ ನೀಡುತ್ತಾನೆ.

ಹೆಗ್ಗಡೆ ಮೊಮ್ಮಗಳ ಅಭಿನಯ
ಪಂಚಮಹಾವೈಭವದ ಅಕ್ಷರಾಭ್ಯಾಸದಲ್ಲಿ ವೃಷಭದೇವನ ಪುತ್ರಿ ಬ್ರಾಹ್ಮಿàಯ ಪಾತ್ರದಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು, ಶ್ರದ್ಧಾ ಅಮಿತ್‌ ಅವರ ಪುತ್ರಿ ಮಾನ್ಯಾ ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ದಿನ ಪುತ್ರಿ ಶ್ರದ್ಧಾ ಅಮಿತ್‌ ನೃತ್ಯ ಮಾಡಿದ್ದರು.
*
ಮಹಾ ಮಸ್ತಕಾಭಿಷೇಕದಲ್ಲಿ ಇಂದು 
ಬೆಳ್ತಂಗಡಿ: ಮಹಾಮಸ್ತಕಾಭಿಷೇಕದ ಪಂಚಮಹಾವೈಭವದಲ್ಲಿ ಫೆ. 13ರ ಬೆಳಗ್ಗೆ 9.30ಕ್ಕೆ ಧರ್ಮಸ್ಥಳದಿಂದ ಶಾಂತಿವನದ ವರೆಗೆ ಹಾಗೂ ಸಂಜೆ 4ಕ್ಕೆ ಶಾಂತಿವನದಿಂದ ಧರ್ಮಸ್ಥಳದ ವರೆಗೆ ಭರತೇಶನ ದಿಗ್ವಿಜಯದ
2 ಐತಿಹಾಸಿಕ ಮೆರವಣಿಗೆಗಳು ನಡೆಯಲಿವೆ.

ಸಂಜೆ 7ಕ್ಕೆ ಅಮೃತ ವರ್ಷಿಣಿಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕದ್ರಿ ಗೋಪಾಲ ನಾಥ್‌-ಸ್ಯಾಕೊÕàಫೋನ್‌ ಮತ್ತು ಪ್ರವೀಣ್‌ ಗೋಡಿVಂಡಿ-ಕೊಳಲು ವಾದ್ಯವೈವಿಧ್ಯ ಉಣಬಡಿಸಲಿ ದ್ದಾರೆ. ತಬಲದಲ್ಲಿ ರಾಜೇಂದ್ರ ನಾಕೋಡ್‌, ಮೃದಂಗದಲ್ಲಿ ಹರಿ ಕುಮಾರ್‌, ಘಟದಲ್ಲಿ ಗಿರಿಧರ್‌ ಉಡುಪ, ಡ್ರಮ್ಸ್‌ ನಲ್ಲಿ ಅರುಣ್‌ ಕುಮಾರ್‌, ಮೋರ್ಸಿಂಗ್‌ನಲ್ಲಿ ರಾಜಶೇಖರ್‌ ಮತ್ತು ಕೀಬೋರ್ಡ್‌ನಲ್ಲಿ ಉಮೇಶ್‌ ಅವರು ಸಹಕರಿಸಲಿದ್ದಾರೆ.
ರತ್ನಗಿರಿ ಬೆಟ್ಟದಲ್ಲಿ ಬೆಳಗ್ಗೆ 8ಕ್ಕೆ ಅಗ್ರೋದಕ ಮೆರವಣಿಗೆ, 216 ಕಲಶ ಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಜಿನಸಹಸ್ರನಾಮ ವಿಧಾನ, ಸಂಜೆ ಧ್ವಜಪೂಜೆ, ಮಹಾಮಂಗಳಾರತಿ ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next