Advertisement

Tamil Nadu: ಪಾಂಬನ್‌ ಸೇತುವೆ- ಶೀಘ್ರ ಚಾಲನೆ

11:51 PM Nov 16, 2023 | Team Udayavani |

ಚೆನ್ನೈ: ತಮಿಳುನಾಡಿನ ರಾಮೇಶ್ವರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಪಾಂಬನ್‌ ರೈಲು ಸೇತುವೆಯ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಕೆಲವೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇತುವೆಯನ್ನು ಲೋಕಾ ರ್ಪಣೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪಾಂಬನ್‌ ದ್ವೀಪದ ರಾಮೇಶ್ವರಂನಿಂದ ಮಂಟಪಂಗೆ ಸಂಪರ್ಕಿಸುವ ಈ ಸೇತುವೆಯನ್ನು ಅಂದಾಜು 535 ಕೋಟಿ ರೂ. ವೆಚ್ಚದಲ್ಲಿ ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ ನಿರ್ಮಿಸುತ್ತಿದೆ. ಹೊಸ ಸೇತುವೆಯಲ್ಲಿ ಎರಡು ರೈಲ್ವೇ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಸಂಪೂರ್ಣ ವಿದ್ಯುದೀಕರಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next