Advertisement

ಎಳ್ಳಮಾವಾಸ್ಯೆ: ಪಲಿಮಾರು ಮಠಾಧೀಶರಿಂದ ಸಮುದ್ರ ಸ್ನಾನ

03:31 PM Jan 13, 2021 | Team Udayavani |

ಕಟಪಾಡಿ: ಎಳ್ಳಮಾವಾಸ್ಯೆಯ ಪ್ರಯುಕ್ತ ಮಟ್ಟು ಸಮುದ್ರದಲ್ಲಿ ಇಂದು ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಶಿಷ್ಯ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರೊಂದಿಗೆ ಸಮುದ್ರ ಸ್ನಾನಗೈದರು.

Advertisement

ಯತಿವರ್ಯರೊಂದಿಗೆ ದೇವಳದ ಅಧ್ಯಕ್ಷರಾದ ಮಟ್ಟು ಲಕ್ಷ್ಮೀನಾರಾಯಣ ರಾವ್, ಮೋಹನ್ ರಾವ್, ಲಕ್ಷ್ಮಣ ರಾವ್, ಸಂತೋಷ್ ಮೆಂಡನ್, ಧೀರಜ್ ಶಿರಿಯಾನ್, ದೇವರಾಜ್ ರಾವ್, ಧೀರಜ್ ಸುವರ್ಣ, ಮಠದ ವಿದ್ಯಾರ್ಥಿಗಳು, ಮತ್ತು ಅಭಿಮಾನಿಗಳು ತೀರ್ಥ ಸ್ನಾನ ಮಾಡಿದರು.

ಎಳ್ಳಮಾವಾಸ್ಯೆಯ ಪ್ರಯುಕ್ತ ಕರಾವಳಿಯಲ್ಲಿ ಹಲವರು ಸಮುದ್ರ ಸ್ನಾನ ಮಾಡಿದರು. ಮಟ್ಟು ಸೇರಿದಂತೆ ಹಲವು ಕಡೆ ಸಮುದ್ರ ಕಿನಾರೆಗಳಲ್ಲಿ ಜನಸ್ತೋಮ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next