Advertisement

ರಶ್ಯದ ವೈಮಾನಿಕ ಕ್ಷಿಪಣಿ ನಿಗ್ರಹ ವ್ಯವಸ್ಥೆ ಖರೀದಿಗೆ ಪಾಕ್‌ ಉತ್ಸುಕ

09:07 AM May 02, 2019 | Team Udayavani |

ಇಸ್ಲಾಮಾಬಾದ್‌ : ಭಾರತೀಯ ವಾಯು ಪಡೆ ನಡೆಸಿದ್ದ ಬಾಲಾಕೋಟ್‌ ಬಾಂಬ್‌ ದಾಳಿಯಿಂದ ಧೃತಿಗೆಟ್ಟಿರುವ ಪಾಕಿಸ್ಥಾನ ವೈಮಾನಿಕ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಪಡೆಯವುದಕ್ಕಾಗಿ ರಶ್ಯದತ್ತ ಮುಖಮಾಡಿದೆ ಎಂದು ವರದಿಗಳು ತಿಳಿಸಿವೆ.

Advertisement

ಭಾರತವನ್ನು ಎದುರಿಸುವ ಸಲುವಾಗಿ ಪಾಕಿಸ್ಥಾನ ಪ್ರಕೃತ ತನ್ನ ಸೇನಾ ಸಾಮರ್ಥ್ಯವನ್ನು ಮೇಲ್ಮಟ್ಟಕ್ಕೇರಿಸುವಲ್ಲಿ ವ್ಯಸ್ತವಾಗಿದೆ. ಅಂತೆಯೇ ಅದು ರಶ್ಯದೊಂದಿಗೆ ನಿಕಟ ಬಾಂಧವ್ಯ ಹೊಂದಲು ಮುಂದಾಗಿದೆ.

ಆ ಪ್ರಕಾರ ಪಾಕಿಸ್ಥಾನ ರಶ್ಯದ ಪ್ಯಾನ್‌ಸರ್‌ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಮಾಸ್ಕೋ ಜತೆಗೆ ಸಂಪರ್ಕ ಬೆಳೆಸಿಕೊಂಡಿದೆಯಲ್ಲದೆ ಅಲ್ಲಿಗೆ ತನ್ನ ಉನ್ನತ ನಿಯೋಗ ಕಳುಹಿಸಲು ಉದ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next