Advertisement

BSF ಪ್ರತಿ ದಾಳಿ: ಪಾಕ್‌ ಸೈನಿಕರು ಕಂಗಾಲು;ದಾಳಿ ನಿಲ್ಲಿಸಲು ಮನವಿ!

05:38 PM May 20, 2018 | Team Udayavani |

ಶ್ರೀನಗರ : ಸದಾ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸುವ ಪಾಕ್‌ ಪಡೆಗಳಿಗೆ ಶನಿವಾರ ಭಾರತೀಯ ಪಡೆಗಳು ಭಾರೀ ತಿರುಗೇಟು ನೀಡಿದ್ದು  ಓರ್ವ ಪಾಕ್‌ ಸೈನಿಕ ಸಾವನ್ನಪ್ಪಿದ್ದಾನೆ. ಭಾರೀ ದಾಳಿಯಿಂದ ಕಂಗಾಲಾದ ಪಾಕ್‌ ಪಡೆಗಳು ದಾಳಿ ನಿಲ್ಲಿಸುವಂತೆ ಮನವಿ ಮಾಡಿವೆ. 

Advertisement

ಕೇಂದ್ರ ಸರ್ಕಾರ ರಂಜಾನ್‌ ಹಿನ್ನಲೆಯಲ್ಲಿ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ನರಿ ಬುದ್ದಿ ತೋರಲು ಪಾಕ್‌ ಸೈನಿಕರು ಮುಂದಾಗಿದ್ದರು. ಮೇ 18 ರಂದು ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. 

ಭಾರತೀಯ ಪಡೆಗಳು ಗಡಿಯುದ್ಧಕ್ಕೂ ಭಾರೀ ಪ್ರತಿ ದಾಳಿ ನಡೆಸಿದ್ದಾರೆ. ಪಾಕ್‌ ಸೈನಿಕರ ಬಂಕರ್‌ ನಾಶ ಮಾಡಿದ್ದು 19 ಸೆಕೆಂಡ್‌ಗಳ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. 

ಭಾರತೀಯ ಯೋಧರ ಭಾರೀ ದಾಳಿಗೆ ಬೆದರಿ ದಾಳಿ ನಿಲ್ಲಿಸುವಂತೆ ಪಾಕ್‌ ಸೇನೆ ಮನವಿ ಮಾಡಿರುವುದಾಗಿ ಬಿಎಸ್‌ಎಫ್ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next