Advertisement

ಟಿಪ್ಪು ಸುಲ್ತಾನ್‌ ಕೊಂಡಾಡಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಶಶಿ ತರೂರ್‌ ಪ್ರಶಂಸೆ

10:02 AM May 08, 2019 | Team Udayavani |

ಹೊಸದಿಲ್ಲಿ : ಬ್ರಿಟಿಷರ ವಿರುದ್ದ ಕಾದಾಡಿ ಪ್ರಾಣಾರ್ಪಣೆ ಗೈದಿದ್ದ ಮೈಸೂರಿನ ಹುಲಿ ಎಂದೇ ಇತಿಹಾಸದಲ್ಲಿ ಜನಜನಿತವಾಗಿರುವ ಟಿಪ್ಪು ಸುಲ್ತಾನನ ಧೈರ್ಯ-ಸ್ಥೈರ್ಯವನ್ನು ಕಳೆದ ಮೇ 4ರಂದು ಆತನ ಮರಣ ವರ್ಷಾಚರಣೆಯ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಹಾಡಿ ಹೊಗಳಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಬಹುವಾಗಿ ಪ್ರಶಂಸಿಸಿದ್ದಾರೆ.

Advertisement

ಅಂತೆಯೇ ತರೂರ್‌ ಅವರ ಮಾತು ವಿವಾದವನ್ನು ಹುಟ್ಟುಹಾಕಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಮ್ರಾನ್‌ ಖಾನ್‌ ಅವರಿಗೆ ಇತಿಹಾಸದಲ್ಲಿರುವ ನೈಜ, ಪ್ರಾಮಾಣಿಕ ಹಾಗೂ ದೂರಗಾಮಿ ಆಸಕ್ತಿಯನ್ನು ಶಶಿ ತರೂರ್‌ ಕೊಂಡಾಡಿದ್ದಾರೆ.

ಆದರೆ ಭಾರತದ ಗ್ರೇಟ್‌ ಹೀರೋ ಟಿಪ್ಪು ಸುಲ್ತಾನ ನನ್ನು ಆತನ ಮರಣ ವರ್ಷಾಚರಣೆ ಸಂದರ್ಭದಲ್ಲಿ ಪಾಕಿಸ್ಥಾನೀ ನಾಯಕನೋರ್ವ ಕೊಂಡಾಡುವಂತಾದದ್ದಕ್ಕೆ ತರೂರ್‌ ನಿರಾಶೆ ವ್ಯಕ್ತಪಡಿಸಿದ್ದಾರೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಾರತೀಯ ಉಪಖಂಡದ ಇತಿಹಾಸವನ್ನು ಎಚ್ಚರಿಕೆಯಿಂದ ಓದುತ್ತಾರೆ ಎನ್ನುವುದು ಸಂತಸದ ವಿಷಯ ಎಂಬುದಾಗಿ ತರೂರ್‌ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next