Advertisement

ಪಾಕಿಸ್ತಾನ ಡೆಡ್‌ ಹಾರ್ಸ್‌

11:18 PM Jan 04, 2020 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್‌ ಮಾತ್ರ ವಿರೋಧಿ ಸುತ್ತಿಲ್ಲ. ದೇಶದ ಎಲ್ಲ ಭಾಗದ ಜನರು ವಿರೋಧಿ ಸುತ್ತಿದ್ದಾರೆ. ಕಾಂಗ್ರೆಸ್‌ ಜನರ ಜೊತೆಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್‌ ನಬಿ ಆಜಾದ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಾರಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪಾಕಿ ಸ್ತಾನ ಡೆಡ್‌ ಹಾರ್ಸ್‌. ಆ ದೇಶವನ್ನು ಭಾರತದ ಜೊತೆಗೆ ಹೋಲಿಸುವುದು ಭಾರತಕ್ಕೆ ಮಾಡುವ ಅವಮಾನ. ಪ್ರಧಾನಿಯವರು ಪಾಕಿಸ್ತಾನವನ್ನು ಭಾರತದ ಸಮ ಎಂದು ಭಾವಿಸುವುದು ಭಾರತಕ್ಕೆ ಅವಮಾನ ಮಾಡಿದಂತೆ.

ಪಾಕಿಸ್ತಾನದ ಬಗ್ಗೆ ಚರ್ಚೆ ಮಾಡುವಷ್ಟು ಭಾರತ ಅಶಕ್ತವಾಗಿದೆಯಾ?. ನಮ್ಮ ಅಕ್ಕ, ಪಕ್ಕ ಬೇರೆ ಬಲಿಷ್ಠ ದೇಶಗಳಿವೆ. ಪಾಕಿಸ್ತಾನದ ಬಗ್ಗೆ ಮಾತನಾಡುವುದು ಭಾರತೀಯರಿಗೂ ಅವಮಾನ ಮಾಡಿದಂತೆ. ಪಾಕಿಸ್ತಾನವನ್ನು ಮುಗಿಸಲು ಕಾಶ್ಮೀರಿ ಪೊಲೀಸರೇ ಸಾಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next